ಬೀದರ್(ವಿಶ್ವ ಕನ್ನಡಿಗ ನ್ಯೂಸ್): ಉಕ್ರೇನ್ ನಲ್ಲಿ ಭಾಲ್ಕಿ, ಬೀದರ್ ಮೂಲದ ಅಮರ್ ಎಂಬ ವೈದ್ಯ ವಿಧ್ಯಾರ್ಥಿಯೋರ್ವ ಅನುಮಾನಾಸ್ಪದ ಸಾವನ್ನಪ್ಪಿದ್ದು ಪೋಷಕರು ಮೃತದೇಹ ತರಸಿಕೊಳ್ಳುವ ಬಗ್ಗೆ ಮಾಹಿತಿ ಹಾಗೂ ರೀತಿ ನಿಯಮಗಳನ್ನು ತಿಳಿಯದೆ ಕಂಗೆಟ್ಟಿದ್ದಾಗ ಮೃತನ ಚಿಕ್ಕಪ್ಪ ಶ್ರೀ ಪವನ್ ರವರು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಶ್ರೀ ಈಶ್ವರ್ ಖಂಡ್ರೆಯನರನ್ನು ಸಹಾಯಕ್ಕಾಗಿ ಸಂಪರ್ಕಿಸಿದರು.
ಸಾಮಾನ್ಯವಾಗಿ ವಿದೇಶಿಗರು ಮೃತರಾದಾಗ ಅದರಲ್ಲೂ ಅಸಾಮಾನ್ಯ ರೀತಿ ಸಾವಿನ ಪ್ರಕರಣಗಳಲ್ಲಿ ವೈದ್ಯಕೀಯ ತಪಾಸಣೆ, ಮತ್ತು ಕಾನೂನು ವಿಧಾನಗಳು ಹೆಚ್ಚು ಎಂದು ತಿಳಿದಿರುವ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು,ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷರೂ,ವಿದೇಶಿ ರಾಯಭಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿ ಅನುಭವ ಇರುವ ಡಾ. ಆರತಿ ಕೃಷ್ಣ ರವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದರು.ಕೂಡಲೇ ಸ್ಪಂದಿಸಿದ ಡಾ. ಆರತಿ ಕೃಷ್ಣ ರವರು ಉಕ್ರೇನ್ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ ,ಅಧಿಕಾರಿಯಾದ ಶ್ರೀ ಪಾರ್ಥ ಸತ್ಪಥಿಯವರನ್ನು ಸಂಪರ್ಕಿಸಿ ಕಾನೂನು ವಿಧಾನ ಮತ್ತು ಪಚರಿಕತೆಗಳನ್ನು ತ್ವರಿತವಾಗಿ ಮಾಡುವುದಲ್ಲದೆ ಮೃತದೇಹವನ್ನು ತರಿಸಲು ರಾಯಬಾರ ಕಛೇರಿಯ ಸಮುದಾಯ ಕಲ್ಯಾಣ ನಿಧಿಯ ಹಣವನ್ನು ತುರ್ತು ಪರಿಸ್ಥಿತಿಗೆ ನೀಡುವಂತೆ ಕೋರಿದರು.ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಗರಿಷ್ಠ ಮೊತ್ತದ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಇತ್ತ ಮೃತನ ಕುಟುಂಬದವರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು ಮೃತದೇಹ ಶೀಘ್ರ ಸ್ವದೇಶ ತಲುಪಲಿದೆ.
ಉಕ್ರೇನ್ ನಿಂದ ಭಾರತಕ್ಕೆ ನೇರ ವಿಮಾನ ವ್ಯವಸ್ಥೆ ಇಲ್ಲ,ಸಂಪರ್ಕ ವಿಮಾನಗಳ ಮೂಲಕ ಕರೆತರಬೇಕಿದೆ.ಅದರಲ್ಲೂ ಕೊರೋನಾದ ಸಂಧಿಗ್ದ ಕಾಲದಲ್ಲಿ ನಿಭಾಯಿಸುವುದು ಸುಲಭವಲ್ಲ.ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಾಗು ಸಾಧ್ಯವಾದಷ್ಟು ಹಣಕಾಸು ವೆಚ್ಚವನ್ನು ಸಮುದಾಯ ಅಭಿವೃದ್ದಿ ನಿಧಿಯಿಂದ ನೀಡುವಂತೆ ರಾಯಭಾರಿಗಳಲ್ಲಿ ಮನವಿ ಮಾಡಿದ್ದೇನೆ.ಅತ್ಯಂತ ನೋವಿನ ಸಂದರ್ಭದಲ್ಲಿ ಹೆತ್ತವರ ಮನಸ್ಸಿಗೆ ಕನಿಷ್ಠ ಸಮಾಧಾನ ತರಬೇಕೆಂಬ ನಿಟ್ಟಿನಲ್ಲಿ ನನ್ನಿಂದಾದ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇನೆ. -ಡಾ.ಆರತಿ ಕೃಷ್ಣ
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.