ನರಿಂಗಾನ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಇಲ್ಲಿ ಶಿಕ್ಷಕ ದಿನಾಚರಾಣೆಯ ಪ್ರಯುಕ್ತ ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಬೆನ್ನೆಲುಬಾಗಿ ನಿಂತು ಸುದೀರ್ಘ ಮೂವತ್ತ ಮೂರು ವರ್ಷಗಳ ಕಾಲ ಅಧ್ಯಾಪಕ ವೃತ್ತಿಯಲ್ಲಿದ್ದು ನಿವೃತ್ತಿ ಹಂತದಲ್ಲಿರುವ ಹಿರಿಯ ಅಧ್ಯಾಪಕ ಶ್ರೀ ಲಕ್ಷ್ಮಣ್ ಪೂಜಾರಿ. ಎಸ್ ಇವರನ್ನು ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಣ್ಣ ಚೌಕಟ್ಟಿನ ಈ ಕಾರ್ಯಕ್ರಮದಲ್ಲಿ ಮೊಂಟೆಪದವು ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲೆಯಾಗಿರುವ (ಕೆ.ಪಿ.ಎಸ್) ಶ್ರೀಮತಿ ವನಿತಾ ದೇವಾಡಿಗ ಗಣ್ಯ ಅತಿಥಿಯಾಗಿ ಆಗಮಿಸಿ ಶಿಕ್ಷಕ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಶೈನ್ ಮತ್ತು ನರಿಂಗಾನ ಪಂಚಾಯತ್ ಮೂರನೇ ವಾರ್ಡ್ ನಿಕಟಪೂರ್ವ ಸದಸ್ಯ ರೆಹ್ಮಾನ್ ಮರಿಕ್ಕಳ ಶಿಕ್ಷಕರಿಗೆ ಶುಭಾಶಯ ತಿಳಿಸಿದರು.
ಶಿಕ್ಷಕರು ಮತ್ತು ಹಳೆವಿದ್ಯಾರ್ಥಿ ಪ್ರತಿನಿಧಿಗಳು ಸೇರಿ ಹಿರಿಯ ಅಧ್ಯಾಪಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರಾದ ಶಿಕ್ಷಕ ಲಕ್ಷ್ಮಣ ಪೂಜಾರಿ ಮಾತನಾಡಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು ತನ್ನ ಸೇವೆಯ ವಿದ್ಯಾರ್ಥಿಯ ಸವಿ ನುಡಿಗಿಂತ ದೊಡ್ಡ ಪ್ರಶಸ್ತಿ ಬೇರೆ ಇಲ್ಲ ಎಂದು ತನ್ನನ್ನು ಗುರುತಿಸಿ ಸನ್ಮಾನಿಸಿದಕ್ಕೆ ಕೃತಜ್ಞತೆ ತಿಳಿಸಿದರು ನಂತರ ಶಿಕ್ಷಕಿಯಾರಾದ ಅನಿತಾಕ್ಷಿ ಮತ್ತು ಚಂಚಲಾಕ್ಷಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಸೌಮ್ಯ P.V ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯೋಪಾಧ್ಯಾರಾದ ಸಂತೋಷ್ ಕುಮಾರ್ ಸಮಾರೋಪ ನುಡಿಗಳನ್ನಾಡಿದರು. ಇತರ ಶಿಕ್ಷಕಿಯರಾದ ಚಂದ್ರಿಕಾ, ರೋಹಿಣಿ, ಸಂಗೀತ ಉಪಸ್ಥಿತರಿದ್ದರು ಅಶೀರುದ್ದೀನ್ ಸರ್ತಾಬೈಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.