ಶ್ರೀ ಹರ್ಷ ಶೃಂಗಳೆಯೊಂದಿಗೆ ಡಾ.ಆರತಿ ಕೃಷ್ಣ
ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷರೂ,ವಿದೇಶಾಂಗ ಕಚೇರಿಗಳಲ್ಲೂ ಸೇವೆ ಸಲ್ಲಿಸಿದ್ದ ಡಾ.ಆರತಿ ಕೃಷ್ಣರವರು ಭಾರತ ಸರಕಾರದ ವಿದೇಶಾಂಗ ಕಾರ್ಯದರ್ಶಿ ಶ್ರೀ ಹರ್ಷ ಶೃಂಗಳ ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಡಾ.ಆರತಿಯವರು ಕೋವಿಡ್ ಸಂದರ್ಭದಲ್ಲಿ ವಿದೇಶದಲ್ಲಿ ಸಂತಸ್ತ್ರರಾದವರನ್ನು ಮರಳಿ ಕರೆತರುವಲ್ಲಿ ಹಾಗು ಅನೇಕ ವಿಶೇಷ ವಿಮಾನಗಳಿಗೆ ಅನುಮತಿ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಈ ನಿಟ್ಟಿನಲ್ಲಿ ಸಹಕರಿಸಿದ ವಿದೇಶಾಂಗ ಕಾರ್ಯದರ್ಶಿ ಶ್ರೀ ಹರ್ಷ ಶೄಂಗಳರವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.ವಿವಿಧ ರಾಜ್ಯಗಳ ಅನಿವಾಸಿಗಳಿಗೆ ಸೂಕ್ತ ಸಮಯದಲ್ಲಿ ಸಹಾಯ ಹಸ್ತ ಚಾಚುವಲ್ಲಿ ತಮಗೆ ಸರಕಾರದ ಕಡೆಯಿಂದ ಸಂಪೂರ್ಣ ಸಹಕಾರ ನೀಡಿದ್ದಕ್ಕಾಗಿ ಅಭಾರಿಯಾಗಿರುವುದಾಗಿ ಅವರಿಗೆ ತಿಳಿಸಿದರು.
ವಿಶೇಷ ವಿಮಾನಗಳ ಉಸ್ತುವಾರಿ ಹೆಚ್ಚುವರಿ ಕಾರ್ಯದರ್ಶಿ ಶ್ರೀ ವಿಕ್ರಂ ದೊರೈಸ್ವಾಮಿಯವರನ್ನೂ ಭೇಟಿಯಾಗಿ ನೂರಾರು ವಿಶೇಷ ವಿಮಾನ ಹಾರಾಟ ಕ್ಲಪ್ತ ಸಮಯಕ್ಕೆ ಹಾರಾಡುವಲ್ಲಿ ಅವಶ್ಯಕ ಅನುಮತಿಗಳನ್ನು ಕೊಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.ಬಾಂಗ್ಲಾದೇಶದ ರಾಯಭಾರಿಯಾಗಿ ಮುಂದಿನ ಹುದ್ದೆಗೆ ತೆರಳಲಿರುವ ಅವರ ಮುಂದಿನ ಜವಬ್ದಾರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಿದರು.
ಶ್ರೀ ವಿಕ್ರಂ ದೊರೆಸ್ವಾಮಿಯವರೊಂದಿಗೆ ಡಾ.ಆರತಿ ಕೃಷ್ಣ
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.