ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೊರೊನಾ ವೈರಸ್ಸ್ ತಡೆಗೆ ಸರಕಾರದ ಜೊತೆ ಕೈ ಜೋಡಿಸಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಿರತ ದುಡಿಯುತ್ತಿರುವ ಎನ್.ಜಿ.ಒ ಮತ್ತು ವೈಧ್ಯರ ಸಹಯೋಗದ ವೆಲ್ ನೆಸ್ ಹೆಲ್ಪ್ ಲೈನ್ ಮೂಲಕ ಇದೀಗ “ಉಚಿತ ಗಂಟಲು ದ್ರವ ಪರೀಕ್ಷೆಯು” ನಡೆಯುತ್ತಿದೆ. ಈಗಾಗಲೇ ವೆಲ್ ನೆಸ್ಸ್ ಮೂಲಕ ಉಚಿತ ಸಹಾಯವಾಣಿ ತೆರೆಯಲಾಗಿದ್ದು, ಸುಮಾರು ಹದಿನೈದು ಸಾವಿರ ಜನರಿಗೆ ಆಯುಷ್ಮಾನ್ ಕಾರ್ಡ್ ಕೂಡ ಮಾಡಿಸಿ ಕೊಟ್ಟಿದೆ. ಅದೇ ರೀತಿ, ತುರ್ತು ಪರಿಸ್ಥಿತಿಯಲ್ಲಿ ಆಕ್ಸಿಜನ್ ಸಿಲೀಂಡರ್, ಪಿಪಿಕಿಟ್ಟ್ ನ್ನು ಸಂಸ್ಥೆಯು ನೀಡುತ್ತಿದೆ. 150 ಕ್ಕಿಂತ ಹೆಚ್ಚು ರೋಗಿಗಳಿಗೆ ಪ್ಲಾಝ್ಮಾ ನೀಡಿದೆ. ಇದೀಗ ಹೆಚ್ಚುತ್ತಿರುವ ಕೊವಿಡ್ ಪ್ರಕರಣದ ಗಂಭೀರತೆಯನ್ನು ಅರಿತು, ಉಚಿತ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಕಂಕನಾಡಿಯಲ್ಲಿ, ಕ್ಲಾಸಿಕ್ ಹರ್ಮೊನಿ ಮತ್ತು ಸಿಂಪೊನಿ ಓನರ್ ಅಸೋಸಿಯೇಶನ್ ಸಹಯೋಗದಲ್ಲಿ ಅಪಾರ್ಟ್ ಮೆಂಟ್ ನ ನಿವಾಸಿಗಳಿಗೆ ಮತ್ತು ಸ್ಥಳೀಯ ನಾಗರಿಕರಿಗೆಕೋವಿಡ್ ಸ್ವಾಬ್ ಟೆಸ್ಟ್ ಉಚಿತವಾಗಿ ಮಾಡುವುದರ ಜೊತೆಗೆ, ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ಸ್ ನ ಅಪಾಯದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಸುಮಾರು 150 ಜನರ ಉಚಿತ ಗಂಟಲು ದ್ರವ ಪರೀಕ್ಷಿಸಲಾಯಿತು. ಕೊರೊನಾ ವೈರಸ್ಸ್ ಕುರಿತಂತೆ ಜನರಲ್ಲಿ ಮೊದಲಿದ್ದ ಜಾಗೃತೆ ಇಲ್ಲವಾಗಿರುವುದು ಗಂಭೀರ ಅಪಾಯವಾಗಿದೆ. ಈಗಾಗಲೇ ಸಾವಿನ ಸಂಖ್ಯೆಯಲ್ಲಿ ಗಣನೀಯ ಹೆಚ್ಚಲವಾಗಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಮತ್ತು ವೆಂಟಿಲೇಟರ್, ಐಸಿಯುನ ಕೊರತೆಯೂ ಇದೆ. ಬಡವರು ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಗೆ ಪರದಾಡುವ ಜೊತೆಗೆ ದುಬಾರಿ ಮೊತ್ತದ ಬಿಲ್ಲ್ ಗಳಿಂದಲೂ ಕಂಗಾಲಾಗಿದ್ದಾರೆ. ಅದೆಷ್ಟೊ ರೋಗಿಗಳು ಆಂಬುಲೆಂನ್ಸ್ ನಲ್ಲೇ ಉಸಿರಾಟಕ್ಕೆ ಕಷ್ಟ ಪಡುವುದು, ಮರಣಿಸುವುದು ಸಾಮಾನ್ಯವಾಗಿದೆ. ನಾವು ಇದರ ಕುರಿತಂತೆ ಜಾಗೃತೆ ಪಾಲಿಸದೇ ಇದ್ದರೆ ನಮ್ಮ ಪ್ರೀತಿ ಪಾತ್ರರನ್ನು ಕಳೆದು ಕೊಳ್ಳುವ ಭಯವಿದೆ ಎಂದು ವೆಲ್ ನೆಸ್ಸ್ ಹೆಲ್ಪ್ ಲೈನ್ ಇದರ ಆಸಿಫ್ ಡೀಲ್ಸ್ ಹೇಳಿದರು.
ವೆಲ್ ನೆಸ್ಸ್ ಹೆಲ್ಪ್ ಲೈನ್, ಹಿದಾಯ ಪೌಂಡೇಶನ್, ಬಿ- ಹ್ಯೂಮನ್ ಜಂಟಿಯಾಗಿ ಈ ಉಚಿತ ಸ್ವಾಬ್ ಟೆಸ್ಟ್ ನಡೆಸಿ ಕೊಟ್ಟಿತ್ತು. ಜಿಲ್ಲೆಯಲ್ಲಿ ಹಲವು ಪಟ್ಟಣ, ಗ್ರಾಮ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ಅಯೋಜಿಸಲು ವೆಲ್ ನೆಸ್ಸ್ ಹೆಲ್ಪ್ ಲೈನನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಕಾರ್ಯಕ್ರಮದಲ್ಲಿ, ಕ್ಲಾಸಿಕ್ ಹಾರ್ಮೊನಿ ಅಸೋಸಿಯೇಶನ್ ನ ನಾಗರಾಜ್, ಮುಬೀನ್, ರೆಹ್ಮಾನ್. ಆಸಿಫ್ ಡೀಲ್ಸ್, ಹಿದಾಯ ಪೌಂಡೇಶನ್ ನ ಅಲ್ತಾಫ್ , ಸಾಸ್ಕೋ ಅಫೀಝ್, ಟೀಂ ಬಿ ಹ್ಯೂಮನ್ ನ, ಅಹ್ನಾಫ್ ಡೀಲ್ಸ್ ಮತ್ತು ತಮೀಮ್ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.