ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದಿನ್ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಹೊಂದುತ್ತಿರುವ ಶೈಖ್ ಮೌಲವಿ (ಖ ಸಿ) ಅವರ ದರ್ಗಾ ಉರೂಸ್ ಕಾರ್ಯಕ್ರಮ ಭಾನುವಾರ ನಡೆದಿದ್ದು, ಈ ಪ್ರಯುಕ್ತ ದರ್ಗಾಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು ದರ್ಗಾ ಶರೀಫ್ಗೆ ಚಾದರ ಅರ್ಪಿಸಿದರು.
ಈ ಸಂದರ್ಭ ಸಯ್ಯಿದ್ ಇಬ್ರಾಹಿಂ ಬಾಷಿತ್ ತಂಙಳ್ ಆನೇಕಲ್-ಮಂಜೇಶ್ವರ, ಮಸೀದಿ ಖತೀಬ್ ಅಬ್ದುಲ್ ರಶೀದ್ ಯಮಾನಿ, ಮದ್ರಸ ಅಧ್ಯಾಪಕರುಗಳಾದ ಅಬೂಬಕ್ಕರ್ ಮದನಿ, ಇಸ್ಮಾಯಿಲ್ ಯಮಾನಿ, ಶರೀಫ್ ಮುಸ್ಲಿಯಾರ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್, ಉಪಾಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್, ಪದಾಧಿಕಾರಿಗಳಾದ ಉಮರುಲ್ ಫಾರೂಕ್, ಮುಹಮ್ಮದ್ ಹನೀಫ್, ಅಬ್ದುಲ್ ಮಜೀದ್ ಗುಡ್ಡೆಅಂಗಡಿ, ಮಜೀದ್ ಬೋಗೋಡಿ, ಹಾಮದ್ ಹಾಜಿ ಪಾಣೆಮಂಗಳೂರು, ಪ್ರಮುಖರಾದ ಯಾಕೂಬ್ ಗುಡ್ಡೆಅಂಗಡಿ, ಶರೀಫ್ ಭೂಯಾ, ಆಸೀಫ್ ಕತಾರ್, ಝಕರಿಯಾ ಕತಾರ್, ಕೈಫ್ ಗುಡ್ಡೆಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.