ಸೋಹಾರ್(ವಿಶ್ವಕನ್ನಡಿಗ ನ್ಯೂಸ್): KCF ಒಮಾನ್ ಇದರ ಅಧೀನದಲ್ಲಿ ಬರುವ KCF ಸೋಹಾರ್ ಝೋನ್ ವತಿಯಿಂದ KCF ಡೇ ಪ್ರಯುಕ್ತ ದ್ವಿತೀಯ ರಕ್ತದಾನ ಶಿಬಿರವು ದಿನಾಂಕ 05-03-2021 ರಂದು ಶುಕ್ರವಾರ ಸೊಹಾರ್ ಸರಕಾರಿ ಆಸ್ಪತ್ರೆಯಲ್ಲಿ ಜರುಗಿತು. ಈ ಒಂದು ಶಿಬಿರದಲ್ಲಿ ಸುಮಾರು 25 ರಷ್ಟು ಯುವಕರು ರಕ್ತದಾನ ಮಾಡಿದರು.
ಈ ಸಮಯದಲ್ಲಿ ಮಾತನಾಡಿದ ಸೊಹಾರ್ ಸರಕಾರಿ ಆಸ್ಪತ್ರೆಯ ವೈದ್ಯರಾದ ಅಬ್ದುಲ್ಲಾ ರವರು, ನಿಜವಾಗಿಯೂ ಒಮಾನ್ ನಲ್ಲಿ ರಕ್ತದ ಕೊರತೆ ಇದೆ, ಇಲ್ಲಿ ರಕ್ತದ ಆವಶ್ಯಕತೆ ತುಂಬಾನೇ ಇದೆ. ಈ ಒಂದು ಸಮಯದಲ್ಲಿ ರಕ್ತದಾನ ಮಾಡಿದ ಎಲ್ಲಾ ಕಾರ್ಯಕರ್ತರ ಹಾಗೂ ಅದರ ಹಿಂದೆ ಉತ್ತಮ ರೀತಿಯಲ್ಲಿ ಕಾರ್ಯಾಚರಿಸಿದ ಎಲ್ಲಾ ನಾಯಕರನ್ನು ನೀವು ಇತರರಿಗೆ ಒಂದು ಮಾದರಿ ಕಾರ್ಯಕ್ರಮ ನಡೆಸಿದ್ದೀರಿ ಅಂತ ಹೇಳುತ್ತಾ ಶ್ಲಾಘನೀಯ ಮಾತುಗಳಿಂದ ನಮ್ಮನ್ನು ಅಭಿನಂದಿಸಿದರು.
ಕೊನೆಯದಾಗಿ KCF ಒಮಾನ್ ರಾಷ್ಟ್ರೀಯ ನಾಯಕರಾದ ಇಕ್ಬಾಲ್ ಎರ್ಮಾಳ್ ರವರು ಮಾತನಾಡಿ, ರಕ್ತದಾನ ಶಿಬಿರಕ್ಕೆ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ ಸೋಹಾರ್ ಸರಕಾರಿ ಆಸ್ಪತ್ರೆಯ ವೈದ್ಯರಿಗೆ KCF ನ ಪರವಾಗಿ ಅಭಿನಂದಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು KCF ಸೋಹಾರ್ ಝೋನ್ ಅಧ್ಯಕ್ಷರಾದ ಅಶ್ರಫ್ ಕುತ್ತಾರ್ ವಹಿಸಿದ್ದರು. KCF ಒಮಾನ್ ರಾಷ್ಟ್ರೀಯ ನಾಯಕರಾದ ಸಿದ್ದೀಕ್ ಮಾಂಬಿಳಿಯವರು ಕಾರ್ಯಕ್ರಮದ ಪೂರ್ಣ ಉಸ್ತುವಾರಿ ವಹಿಸಿದ್ದರು. ಮಝೀರ್ ಬಜ್ಪೆ ಧನ್ಯವಾದ ನಡೆಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.