ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಶ್ರೀ ಉಳ್ಳಾಕ್ಲು ಮಲರಾಯ ಧೂಮಾವತಿ ದೈವಸ್ಥಾನ ಕೆದಿಲ ಬಂಟ್ವಾಳ ತಾಲೂಕು ಇಲ್ಲಿ 12.03.2021 ರಿಂದ 14.03.2 021 ರವರೆಗೆ ವರ್ಷವಧಿ ಜಾತ್ರೋತ್ಸವ ಜರಗಲಿದೆ.
13.3.21 ಮಧ್ಯಾಹ್ನ ಮಹಾ ಪೂಜೆ ಪ್ರಸಾದ ವಿತರಣೆ ಸಂಜೆ ದೀಪರಾಧನೆ, ಶ್ರೀ ಮಲರಾಯ, ಶ್ರೀ ಧೂಮಾವತಿ, ಶ್ರೀ ರಕ್ತೇಶ್ವರಿ ಮತ್ತು ಶ್ರೀ ಪಿಲಿ ಚಾಮುಂಡಿ ದೈವಗಳ ನೇಮ ರಾತ್ರಿ ಅನ್ನ ಸಂತರ್ಪಣೆ. 14.3.21 ರಂದು ಶ್ರೀ ಗಣಪತಿ ಹೋಮ ಕಲಶಪ್ರತಿಷ್ಠೆ ಧ್ವಜಾರೋಹಣ ಚಾವಡಿಗೆ ಭಂಡಾರ ಹೋಗುವುದು, ಸಂಪ್ರೊಕ್ಷಣೆ, ಮಂತ್ರಾಕ್ಷತೆ ಸಂಕ್ರಮಣ ತಂಬಿಲ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತಾವುಗಳು ಬಂದು ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರದ ಪರವಾಗಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.