ಹಳೆಯಂಗಡಿ(ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಬಹಳಷ್ಟು ಪಸರಿಸಿದೆ ಸೋಂಕಿತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಲೇ ಇದೆ ಈ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಉಚಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸುವ ಮುಖಾಂತರ ಸೋಂಕಿತರ ಸಂಖ್ಯೆ ಯನ್ನು ತಕ್ಕಮಟ್ಟಿಗೆ ಹತೋಟಿಗೆ ತರಬಹುದು ಎಂದು, ತ ಕೋವಿಡ್ ಲಸಿಕಾ ಕಾರ್ಯಕ್ರಮ” ದಲ್ಲಿ ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರ. ಅಭಿಪ್ರಾಯಪಟ್ಟರು.
ರಿಲಾಯನ್ಸ್ ಅಸೋಸಿಯೇಷನ್(ರಿ.) ಬೊಳ್ಳೂರು, ಹಳೆಯಂಗಡಿ ಇದರ ಆಶ್ರಯದಲ್ಲಿ…. ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು, ಕೆಮ್ರಾಲ್, ಇದರ ಸಹಯೋಗದೊಂದಿಗೆ ರಿಲಾಯನ್ಸ್ ಭವನ, ಇಂದಿರಾನಗರದಲ್ಲಿ ನಡೆದ “ಕೋವಿಡ್ ಲಸಿಕಾ ಬಗ್ಗೆ ಮಾಹಿತಿ ಹಾಗು ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಮಾತನಾಡಿ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲಿ ನ ಸಂಘ-ಸಂಸ್ಥೆಗಳು ಇತ್ತೀಚಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶ್ಲಾಘನೀಯ ಮುಂದಿನ ದಿನಗಳಲ್ಲಿ ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯು ಸಂಪೂರ್ಣ ಕೋವಿಡ್ ಮುಕ್ತವಾಗಿ ಆರೋಗ್ಯವಂತರಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಮ್ರಾಲ್ ಅಸ್ಪತ್ರೆ ಔಷಧಿ ವಿಭಾಗದ ಶಖಿನಾ ಬಾನು ಕೋವಿಡ್ ಬಗ್ಗೆ ಮಾಹಿತಿ ನೀಡೀದರು, ಎ.ಕೆ ಜೀಲಾನಿ, ಹಳೆಯಂಗಡಿ ಪಂಚಾಯತ್ ಉಪಾಧ್ಯಕ್ಷ ಅಶೋಕ್ ಕೋಟ್ಯಾನ್, ಕಾರ್ಯದರ್ಶಿ ಶ್ರೀ ಶೈಲಾ, ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಕಾದರ್, ವಿನೋದ್ ಕೊಳುವೈಲು, ನಿರಂಜಳಾ, ಶಶಿಕಳಾ, ಸುಕೇಶ್ ಪಾವಂಜೆ, ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಮುಬಾರಕ್, ಸದಸ್ಯರಾದ ಕಬೀರ್, ನಝೀರ್, ಅಕ್ಬರ್, ಫಾರೂಕ್, ಶಂಸೀರ್ ಹಾಗು ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಹಾರಿಸ್ ನವರಂಗ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.