ಬಳ್ಳಾರಿ(ವಿಶ್ವಕನ್ನಡಿಗ ನ್ಯೂಸ್): ಏಪ್ರಿಲ್ 29 ಅನ್ಯಾಯವಾಗಿ ಯು. ಪಿ ಯ ಮಥುರಾ ಜೈಲಿನಲ್ಲಿರುವಂತಹ ಅಮಾಯಕ ವಿದ್ಯಾರ್ಥಿ ನಾಯಕ ರೌಫ್ ಶರೀಫ್ ರವರ ಬಂಧನವನ್ನು ಖಂಡಿಸಿ ಮತ್ತು ಇದೀಗ ಮಥುರಾ ಜೈಲಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು ಯಾವುದೇ ಚಿಕಿತ್ಸೆಯನ್ನು ನೀಡದೆ ಇರುವಂತಹ ಯು ಪಿ ಪೊಲೀಸರ ಮತ್ತು ಸರಕಾರದ ನಡೆಯನ್ನು ಖಂಡಿಸಿ ದೇಶಾದ್ಯಂತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ಇದರ ಭಾಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಹೊಸಪೇಟೆ ಮತ್ತು ಸಿರುಗುಪ್ಪ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಕೋವಿಡ್-19ರ ಲಾಕ್ಡೌನ್ ಸೂಚನೆ ಪಾಲಿಸುತ್ತಾ ತಮ್ಮ ತಮ್ಮ ಮನೆಯಲ್ಲೇ ಪ್ಲೆ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ಅಭಿಯಾನದಲ್ಲಿ ಕೈ ಜೋಡಿಸಿದರು.
ಬಳ್ಳಾರಿ ಜಿಲ್ಲಾ ಉಪಾಧಯಕ್ಷ ಶಾಷೂ , ಜಿಲ್ಲಾ ಜಂಟಿ ಕಾರ್ಯದರ್ಶಿ ಹಬೀಬ್ ಹಾಗೂ ಹೊಸಪೇಟೆ ಮತ್ತು ಸಿರುಗುಪ್ಪ ಏರಿಯಾ ಸಮಿತಿ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.