ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡೆರೇಷನ್ ಎಸ್ಸೆಸ್ಸೆಫ್ ಮೊಗರ್ಪಣೆ ಶಾಖೆಯ ವತಿಯಿಂದ ರಮಳಾನ್ ಹಾಗೂ ಈದುಲ್ ಫಿತ್ವರ್ ಹಬ್ಬದ ಪ್ರಯುಕ್ತ ಮೊಗರ್ಪಣೆ ಜಮಾಅತ್ ವ್ಯಾಪ್ತಿಯ ಇಪ್ಪತ್ತೈದರಷ್ಟು ಅರ್ಹ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ರಮಳಾನ್ ಹಾಗೂ ಈದ್ ಕಿಟ್ ವಿತರಣೆಯು ನಡೆಯಿತು.
ಜೊತೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಓರ್ವ ಸಹೋದರನ ಕುಟುಂಬಕ್ಕೆ ಸುಮಾರು ಹತ್ತು ಸಾವಿರ ರೂಪಾಯಿ ಹಾಗೂ ಓರ್ವ ಬಡ ಉಸ್ತಾದರ ಸಂಕಷ್ಟಕ್ಕೆ ಸ್ಪಂದಿಸಿ ಸುಮಾರು ಇಪ್ಪತ್ತೊಂದು ಸಾವಿರ ರೂಪಾಯಿಯನ್ನು ಧನ ಸಹಾಯ ರೂಪದಲ್ಲಿ ನೀಡಲಾಯಿತು.
ಊರ ದಾನಿಗಳ ಉದಾರ ಸಹಾಯ- ಸಹಕಾರದಿಂದ ಸುಮಾರು ಅರುವತ್ತೈದು ಸಾವಿರ ರೂಪಾಯಿಯ ಸಹಾಯವನ್ನು ಮೊಗರ್ಪಣೆ ಶಾಖೆ ಎಸ್ಸೆಸ್ಸೆಫ್ ವತಿಯಿಂದ ನೀಡಲಾಗಿದ್ದು, ವಿತರಣೆಯ ಸಂದರ್ಭ ಸಮಿತಿಯ ನಾಯಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.