(www.vknews.com) : ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದು ಒಂದೇ ಮನೆಯ ಇಬ್ಬರು ಮೃತ ರೋಗಿಗಳ ಶವವನ್ನು ಹಿಡಿದಿಟ್ಟು ಅಘಾದ ಮೊತ್ತದ ಬಿಲ್ ಮಾಡಿದ ಆಸ್ಪತ್ರೆಯ ಅನ್ಯಾಯದ ವಿರುದ್ಧ ದ್ವನಿ ಎತ್ತಿದ್ದಕ್ಕಾಗಿ ಸಾಮಾಜಿಕ ಹೋರಾಟಗಾರ,ಯುವ ಕಾಂಗ್ರೆಸ್ ಪದಾಧಿಕಾರಿ,ಮುಸ್ಲಿಮ್ ಒಕ್ಕೂಟ ಸದಸ್ಯರ ವಿರುದ್ಧ ಆಸ್ಪತ್ರೆ ಮತ್ತು ಪೊಲೀಸು ಇಲಾಖೆ ಪ್ರಕರಣ ದಾಖಲಿಸಿ ಬಂಧಿಸಿರುವುದು ಅನ್ಯಾಯದ ಪರಮಾವಧಿ ಆಗಿದೆ. ಕೋರೋಣ ಸಂಧಿಗ್ಧತೆ ಮತ್ತು ಇತರ ಸಮಯಗಳಲ್ಲಿ ಮೃತ ರೋಗಿಗಳ ಶವಗಳನ್ನು ಆಸ್ಪತ್ರೆಯಲ್ಲಿ ತಡೆದು ಇಡುವುದರ ವಿರುದ್ಧ ಸರಕಾರ ನಿರ್ದೇಶನ ಇದ್ದು,ಇದು ಆಸ್ಪತ್ರೆ ಯ ಸ್ವಯಂ ಕೃತ ಅಪರಾಧ ವಾಗುತ್ತದೆ.
ಈ ಘಟನೆಯಲ್ಲಿ ಪೊಲೀಸು ಇಲಾಖೆ ಆಸ್ಪತ್ರೆ ಆಡಳಿತ ವರ್ಗದ ವಿರುದ್ಧ ಪ್ರಕರಣ ದಾಖಲಿಸುವ ಹೊರತು,ಸಾಮಾಜಿಕ ಹೋರಾಟಗಾರ ರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದು ಅನ್ಯಾಯದ ಪರಮಾವಧಿ ಆಗಿದೆ. ಇದು ನ್ಯಾಯ ಪರ ದ್ವನಿಯನ್ನು ಅಡಗಿಸುವ ಪ್ರಯತ್ನ ವಾಗಿದೆ.ಆಸ್ಪತ್ರೆ ಮತ್ತು ಪೊಲೀಸರ ನಡೆ ಖಂಡನಾರ್ಹ.
ಕೆ.ಅಶ್ರಫ್(ಮಾಜಿ ಮೇಯರ್). ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.