ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು ಅವರ ಸಾರಥ್ಯದಲ್ಲಿ ಮುಂದೆ ಬಂದು ಪುತ್ತೂರು ತಾಲೂಕಿನ ಬಡವರು ,ನಿರ್ಗತಿಕರು, ಕೊರೊನಾ ಸೋಂಕಿತರು ,ಆಶಾ ಕಾರ್ಯಕರ್ತೆಯರಿಗೆ , ಹಾಗೂ ಅನಾರೋಗ್ಯ ಪೀಡಿತರಿಗೆ ದಿನಸಿ ವಸ್ತುಗಳು, ,ತರಕಾರಿ, ಪೌಷ್ಟಿಕ ಆಹಾರ, ಇಮ್ಯುನಿಟಿ ಬೂಸ್ಟರ್,ಸಾನಿಟೈಸರ್, ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಇವುಗಳನ್ನು ಉಚಿತವಾಗಿ ವಿತರಿಸುತ್ತಾ ಬಂದಿರುವ HMC ಜನಜಾಗೃತ್ ದಳ್ ಸಂಘಟನೆಯ ವತಿಯಿಂದ ಪುತ್ತೂರಿನಲ್ಲಿ ಸುಮಾರು 70 ಪೌರ ಕಾರ್ಮಿಕರಿಗೆ ದಿನಸಿ ವಸ್ತುಗಳು, ಪೌಷ್ಟಿಕ ಆಹಾರ ಹಾಗೂ ಇಮ್ಯುನಿಟಿ ಬೂಸ್ಟರ್ ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ , ಮಾತನಾಡಿದ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು, ಕೋರೊನಾ ಮುಕ್ತ ಪುತ್ತೂರಿಗಾಗಿ ಎಂಬ ಧ್ಯೇಯದೊಂದಿಗೆ ಲೋಕಾರ್ಪಣೆಗೊಂಡು, ಸಮಾಜದ ಬೆಳಕಾಗಿರುವ ಮನ್ಮಿತ್ ರೈ ಹಾಗೂ hmc ಜನಜಾಗೃತ್ ದಳ್ ತಂಡದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ನಗರಸಭಾಧ್ಯಕ್ಷ ಜೀವಂದರ್ ಜೈನ್, ನ್ಯಾಯವಾದಿ ಎನ್.ಕೆ.ಜಗನ್ನೀಸರಾವ್, ಬಪ್ಪಳಿಗೆ ಖತೀಬರಾದ ಪಯಾಝ್ ಅಝ್ ಹರಿ, ಮಾತನಾಡಿ ಸಂಘಟನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ, ಗೌರಿ ಬನ್ನೂರು,ಸದಸ್ಯೆ ಪಿ.ಜಿ. ಜಗನ್ನೀಸರಾವ್, ಪುಡಾದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧುಕುಮಾರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಭರೀನಾಥ್, ಅರುಣ್, ಆರೋಗ್ಯ ನಿರೀಕ್ಷಕರಾದ , ಶ್ವೇತಾ ಕಿರಣ್, ರಾಮಚಂದ್ರ,ಸಂತೆ ವ್ಯಾಪಾರ ಸಂಘದ ಅಧ್ಯಕ್ಷ ಡಿಕೆ.ಹಮೀದ್, ದಾವುದ್ ಬಪ್ಪಳಿಗೆ, ದಾಮೋದರ ಹೆಗ್ಡೆ, ಎಚ್.ಎಂ.ಸಿ. ಜನಜಾಗೃತ್ ದಳ ದ ಗೌರವಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಸಹ ಸಂಚಾಲಕರಾದ ಭಾನುಪ್ರಕಾಶ್, ಸಲೀಂ ಬರೆಪ್ಪಾಡಿ, ನಿಹಾಲ್, ಸಾಜಿದ್ ಬರೆಪ್ಪಾಡಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಚಾಲಕ ರಝಾಕ್ ಬಿ.ಎಚ್.ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.