ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ):- ತಾಲ್ಲೂಕು ಕಚೇರಿ ಮುಂದೆ ಸೋಮವಾರ ಸಿಐಟಿಯು ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಧರಣಿ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾತಕೋಟ ನವೀನ್ ಕುಮಾರ್ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ , ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ನಿರ್ವಹಿಸುವ ಕಾರ್ಮಿಕರಿಗೆ , ಸರ್ಕಾರ ಕೊವಿಚ್ ಪರಿಹಾರವಾಗಿ ತಿಂಗಳಿಗೆ. ರೂ .೧೦ ಸಾವಿರ ಪರಿಹಾರ ನೀಡಬೇಕು. ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರೂ .೧೦ ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಎಲ್ಲಾ ಕಾರ್ಮಿಕರಿಗೆ ಆಹಾರ ಪದಾರ್ಥ ಒಳಗೊಂಡ ಕಿಟ್ ವಿತರಿಸಬೇಕು. ಕಾರ್ಮಿಕರ ಮಕ್ಕಳಿಗೆ ಹಿಂದಿನ ವರ್ಷದ ಲ್ಯಾಪ್ ಟಾಪ್ ಹಾಗೂ ಸ್ಕೂಲ್ ಕಿಟ್ ವಿತರಿಸಬೇಕು. ಕಾರ್ಮಿಕ ಇಲಾಖೆಯ ಸೆಸ್ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಬಾರದು. ಕೋವಿಡ್ ಸಂಕಷ್ಟದ ನಡುವೆ ಕಾರ್ಮಿಕ ಕುಟುಂಬಗಳು ಬೀದಿಗೆ ಬೀಳದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪ ತಹಶೀಲ್ದಾರ್ಗೆ ನೀಡಲಾಯಿತು.
ವಿವಿಧ ಕಾರ್ಮಿಕ ಸಂಘನೆಗಳ ಮುಖಂಡರಾದ ನಾಗಭೂಷಣ , ಎನ್.ಆಂಜಿಲಪ್ಪ , ಮುನಿರಾಜು , ಜಿ.ಶ್ರೀನಿವಾಸ್ , ಚಾಂದ್ ಪಾಷ , ಉಮಾದೇವಿ , ಶ್ರೀನಿವಾಸ್ , ವೆಂಕಟೇಶ್ , ವಿಜಯಮ್ಮ , ಗುಲಾಬ್ ಜಾನ್ , ವಿಶ್ವನಾಥ್ ಇದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.