ಹೆಬ್ರಿ ,(ವಿಶ್ವ ಕನ್ನಡಿಗ ನ್ಯೂಸ್ ):ತಾಲೂಕಿನ ಶೇಡಿಮನೆ ಗ್ರಾಮದ ಅರಸಮ್ಮನ ಕಾನು ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಭೇಟಿ ಯಾಡಲು ಬಂದ ನಾಲ್ಕು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ . ಜು -29 ರ ಮಧ್ಯ ರಾತ್ರಿ ಗುಂಡಿನ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ತತ್ಕ್ಷಣ ಕಾರ್ಯಪ್ರವೃತ್ತ ರಾದ ಪೊಲೀಸರು ನಾಲ್ಕು ಜನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವೀ ಯಾಗಿದ್ದಾರೆ. ಕಾರ್ಕಳದ ಕಾಬೆಟ್ಟು ಷ್ಟಾನಿ ಸ್ಲೇವಿನ್ (50),ಕುಕ್ಕಂದೂರು ಗ್ರಾಮದ ನಕ್ರೆ ಮೆಲ್ವಿನ್ ಪ್ರಾಕ್ಸಿ ಡಿಸೋಜಾ (38) ಹೆಬ್ರಿ ಅಕ್ಷಯ್ ಪೂಜಾರಿ (23) ಕಾರ್ಕಳದ ಆನೆಕೆರೆ ಮೋಹನ್ (46) ಬಂಧಿತ ಆರೋಪಿಗಳು. ಆರೋಪಿಗಳಿಂದ ಡಿ ಬಿ ಬಿ ಯಲ್ ಬಂದೂಕು ,6 ಸಜೀವ ಗುಂಡು ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.