ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ನನ್ನ ತಂದೆ ಸರಕಾರಿ ಅಧಿಕಾರಿ. ಅವರ ವ್ಯಕ್ತಿತ್ವ -ಜೀವನವೇ ನನಗೆ ಆದರ್ಶ. ಪರಿಶ್ರಮ ಮತ್ತು ಸಮರ್ಪಣೆಯಿಂದ ಬದುಕಿನ ಯಶಸ್ಸು ಇದೆ ಎಂದು ಅವರು ನಮಗೆ ಕಲಿಸಿದರು. ನಡೆ -ನುಡಿ-ದಿನಚರಿ ಮತ್ತು ಸ್ವಭಾವ ಕಲಿಯಲು ಅವರೇ ನಮಗೆ ಮಾದರಿಯಾಗಿದ್ದರು. ತಂದೆ ನಮಗಿಂತ ನಮ್ಮ ಬದುಕನ್ನು ಹೆಚ್ಚು ಪ್ರೀತಿಸಿದ್ದರು. ಹಾಗಾಗಿ ನಮ್ಮ ಬದುಕಿಗೆ ಏನು ಬೇಕು ಅದನ್ನು ಅವರು ಒದಗಿಸಿದ್ದರು.
ಇಂದು ನಾನು ಭಾರತೀಯ ನೌಕಾ ಪಡೆಯ ಲೆಪ್ಟಿನೆಂಟ್ ಆಗಲು ನನ್ನ ಪ್ರಯತ್ನ – ದೇಶ ಸೇವೆ ಮಾಡುವ ತುಡಿತದ ಜೊತೆ ಅಪ್ಪನ ಆತ್ಮೀಯ ಸಲಹೆ ಮತ್ತು ಮಾರ್ಗದರ್ಶನ ಇತ್ತು ಎಂದು ಭಾರತೀಯ ನೌಕಾ ಸೇನೆಯ ಲೆಪ್ಟಿನೆಂಟ್ ಅಧಿಕಾರಿ ಹಾಫಿಜ್ ಕೆ ಎ ಹೇಳುವಾಗ, ಅವರ ಸಮೀಪದಲ್ಲೇ ಕುಳಿತಿದ್ದ ಅವರ ತಂದೆಯ ಮುಖದಲ್ಲಿ ಸಾರ್ಥಕತೆ ಇತ್ತು. ಪುತ್ತೂರು ಕಮ್ಯೂನಿಟಿ ಸೆಂಟರ್ ನಲ್ಲಿ, ವಿಧ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಲು ಆಗಮಿಸಿದ್ದ ಹಾಫಿಜ್ ಅವರು ಯುವ ಸಮುದಾಯಕ್ಕೆ ಸ್ಪೂರ್ತಿ ಮತ್ತು ಚೈತನ್ಯವಾಗಿದ್ದಾರೆ.
ಕಮ್ಯೂನಿಟಿ ಸೆಂಟರ್ ನಲ್ಲಿ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಫಿಜ್ ರನ್ನು ಸನ್ಮಾನಿಸಿ ಮಾತನಾಡುತ್ತಾ, ವಿಧ್ಯಾರ್ಥಿ ಜೀವನದಲ್ಲಿ ಹೆತ್ತವರ ಪಾತ್ರ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಹೆತ್ತವರು, ಮಕ್ಕಳನ್ನು ಅಭಿಮಾನ ಪಡುವಂತೆ ಬೆಳೆಸ ಬೇಕು. ದೇಶ ಸೇವೆ ಮಾಡುವ, ಸಮಾಜಮುಖಿಯಾದ ಮತ್ತು ಜನರ ಪ್ರೀತಿ ಗಳಿಸುವ ಯುವತ್ವ ಶ್ರೇಷ್ಠವಾದದ್ದು, ಈ ನಿಟ್ಟಿನಲ್ಲಿ ಹಾಫಿಜ್ ರವರು ಎಲ್ಲಾ ಯುವಕರಿಗೂ ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಭಾರತೀಯ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಫಿಜ್ ರವರು ಪುತ್ತೂರು ತಾಲೂಕಿನ ಕಬಕ ಎಂಬ ಊರಿನವರು. ಪ್ರಸ್ತುತ ಪುತ್ತೂರು ನಂದಿಲ ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಅಬುಬಕ್ಕರ್ ರವರು ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿಯಾಗಿ ನಿವೃತ್ತರಾದವರು. ಇವರ ಒಬ್ಬ ಮಗ ಇಂಜಿನಿಯರ್ ಆಗಿ ದುಬಾಯಿಯಲ್ಲಿ ಉಧ್ಯಮಿಯಾಗಿದ್ದರೆ, ಇವರ ಕಿರಿಯ ಮಗ ಇಂಜಿನಿಯರ್ ಮುಗಿಸಿ, ಪ್ರಾನ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಮಾಡಿ ಅಲ್ಲಿ ಇಂಟನ್ ಶಿಫ್ ನಲ್ಲಿದ್ದಾರೆ. ಮಕ್ಕಳ ಕನಸನ್ನು ಕೇಳುವ ತಂದೆ, ಹಾಫಿಜ್ ರವರಲ್ಲಿ ಸಣ್ಣ ಪ್ರಾಯದಲ್ಲೇ ಸೈನ್ಯಕ್ಕೆ ಸೇರುವ ತುಡಿತ ಇರುವುದನ್ನು ಗುರುತಿಸಿ ಆ ನಿಟ್ಟಿನಲ್ಲೇ ಆತನಿಗೆ ಮಾರ್ಗದರ್ಶನ ನೀಡಿದರು. ತಂದೆಯ ಸರಿಯಾದ ಮಾರ್ಗದರ್ಶನದಿಂದ ಹಾಫಿಜ್ ಇಂದು ನಾಡಿಗೆ ಹೆಮ್ಮೆಯಾಗುವ ಸಾಧನೆ ಮಾಡಿದ್ದಾರೆ. ಪುತ್ತೂರು ಕಮ್ಯೂನಿಟಿ ಸೆಂಟರ್ ಹಾಫಿಜ್ ರಂತೆ ನಾಡಿನ ಯುವ ಸಮೂಹ ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಸೇವೆ ನೀಡುತ್ತಿದೆ. ಸಂಸ್ಥೆಯ ಕಾರ್ಯ ಚಟುವಟಿಕೆ ವೀಕ್ಷಿಸಿದ ಹಾಫಿಜ್ ರವರು, ನನಗೆ ಸರಿಯಾದ ದಾರಿ ತೋರಿಸಲು ತಂದೆಯವರಿದ್ದರು. ಆದರೆ, 90% ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಿಲ್ಲ. ಆಯ್ಕೆಯಲ್ಲಿ ಎಡವುತ್ತಲೂ ಇದ್ದಾರೆ. ಹತ್ತನೇ ತರಗತಿಯಲ್ಲಿ ವಿಧ್ಯಾರ್ಥಿಗಳು ಗುರಿ ನಿಶ್ಚಯಿಸಬೇಕು, ಅದಕ್ಕೆ ಕ್ಯಾರಿಯರ್ ಗೋಲ್ ಸೆಟ್ಟ್ ಮಾಡಲು ಸಂಸ್ಥೆಯ ಎಕ್ಸ್ ಪರ್ಟ್ ಗಳು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು. ಇದು ಯಾವಾಗಲೋ ಆಗಬೇಕಿತ್ತು. ತಡವಾಗಿಯಾದರೂ ಆಗಿದೆ ಎನ್ನುವ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ. ದೇಶ ಸೇವೆ ಮಾಡುವ ಉತ್ಸಾಹ – ತುಡಿತ ಇರುವ ನನ್ನಂತ ಯುವಕರು ತುಂಬಾ ಇದ್ದಾರೆ. ಅವರಿಗೆ ಕೋರ್ಸ್ ಯಾವುದು ? ಎಕ್ಸಾಮ್ ಯಾವುದು ? ಎಕ್ಸಾಮ್ ಸೆಂಟರ್ ಎಲ್ಲಿದೆ ? ಅದಕ್ಕೆ ಅಪ್ಲೈ ಮಾಡುವುದು ಹೇಗೆ ? ಅದರ ನಿಯಮ ಏನು ? ಇದು ಯಾವುದೂ ಗೊತ್ತಿಲ್ಲ. ಹೆಚ್ಚಿನವರು ಡಾಕ್ಟರ್, ಇಂಜಿನಿಯರ್, ಶಿಕ್ಷಕರಾಗಬೇಕು ಎಂದು ಕಾಮನ್ ಆಗಿ ಹೇಳುತ್ತಾರೆ. ಪ್ರತೀ ವಿದ್ಯಾರ್ಥಿಯ ಜ್ಞಾನ – ಪ್ರತಿಭೆ – ಆಸಕ್ತಿ ಗುರುತಿಸಿ ಅವರನ್ನು ಸರಿಯಾದ ದಾರಿಯಲ್ಲಿ ಪ್ರೋತ್ಸಾಹಿಸಲು ಇಂತಹ ಕಮ್ಯೂನಿಟಿ ಸೆಂಟರ್ ರಾಜ್ಯದೆಲ್ಲೆಡೆ ಆಗಬೇಕು, ಪ್ರತೀಯೊಬ್ಬ ವಿಧ್ಯಾರ್ಥಿಯು ಇದರ ಪ್ರಯೋಜನ ಪಡೆಯಬೇಕು ಎಂದು ಆಶಿಸುತ್ತೇನೆ ಎಂದ ಹಾಫಿಝ್ ಸಂಸ್ಥೆಗೆ ಶುಭ ಹಾರೈಸಿದರು.
Sunni Today
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.