ಕುಂಬ್ರ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸಫ್ ಕುಂಬ್ರ ಸೆಕ್ಟರ್ ವತಿಯಿಂದ ಎಸ್ಸೆಸ್ಸಫ್ ಮೈದಾನಿಮೂಲೆ ಶಾಖೆ ಸಹಕಾರದೊಂದಿಗೆ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಎಸ್ಸೆಸ್ಸಫ್ ಬ್ಲಡ್ ಸೈಬೋ ಕರ್ನಾಟಕ ಇದರ ಬೃಹತ್ ರಕ್ತದಾನ ಶಿಬಿರವು ಮೈದಾನಿಮೂಲೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಈ ರಕ್ತದಾನ ಶಿಬಿರದಲ್ಲಿ 78 ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾದರಿಯಾದರು. ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಮುಹ್ಯುದ್ದೀನ್ ಜುಮಾ ಮಸೀದಿ ಮೈದಾನಿಮೂಲೆ ಮುಖ್ಯಗುರು ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ದುವಾದ ಮೂಲಕ ಉದ್ಘಾಟಿಸಿದರು.
ಮುಹ್ಯುದ್ದೀನ್ ಜುಮಾ ಮಸೀದಿ ಮೈದಾನಿಮೂಲೆ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಅಧ್ಯಕ್ಷತೆ ವಹಿಸಿದ್ದರು. ಸ್ವಯಂ ರಕ್ತದಾನ ಮಾಡುವುದರ ಮೂಲಕ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಉಜ್ರೋಡಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ವೈಎಸ್ ಮೈದಾನಿಮೂಲೆ ಬ್ರಾಂಚ್ ಅಧ್ಯಕ್ಷ ಇಸುಬು ಮೈದಾನಿಮೂಲೆ, ಜಮಾಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕೆ.ಎ, ಎಸ್ಸೆಸ್ಸಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಪುತ್ತೂರು ಡಿವಿಶನ್ ಕಾರ್ಯದರ್ಶಿ ಮುಹ್ಸಿನ್ ಕಟ್ಟತ್ತಾರು, ಕುಂಬ್ರ ಸೆಕ್ಟರ್ ಕಾರ್ಯದರ್ಶಿ ಇರ್ಶಾದ್ ಗಟ್ಟಮನೆ, ಕೋಶಾಧಿಕಾರಿ ಇಲ್ಯಾಸ್ ಕಟ್ಟತ್ತಾರು, ನೌಶಾದ್ ಸಅದಿ ಗಟ್ಟಮನೆ, ಸಿದ್ದೀಕ್ ಸಖಾಫಿ ಮಾಡಾವು, ಶಹೀಂ ಅರಿಕ್ಕಿಲ, ರೆಡ್ಕ್ರಾಸ್ ಸೊಸೈಟಿಯ ಪ್ರವೀಣ್ , ಕೆ.ಸಿಎಫ್ ನಾಯಕರಾದ ಅಶ್ರಫ್ ಸಖಾಫಿ ಪರ್ಪುಂಜ, ಸಲೀಂ ಸಖಾಫಿ ಮೈದಾನಿಮೂಲೆ, ಇಲ್ಯಾಸ್ ಅಜ್ಜಿಕಟ್ಟೆ, ಮೈದಾನಿಮೂಲೆ ಶಾಖಾಧ್ಯಕ್ಷ ಅಸ್ಕರ್ ಮೈದಾನಿಮೂಲೆ, ಕಾರ್ಯದರ್ಶಿ ಇಲ್ಯಾಸ್ ಕೆ.ಎಂ, ಸಅದ್ ಎಂ.ಎಂ , ಆಶಿಕ್ ಸಿ.ಹೆಚ್ , ರೆಂಜಲಾಡಿ ಕೂಡುರಸ್ತೆ ಶಾಖಾಧ್ಯಕ್ಷ ಮಜೀದ್ ಜೌಹರಿ, ಅಝೀಝ್ ನೀರ್ಪಾಡಿ ಸಹಿತ ಸೆಕ್ಟರ್ ವ್ಯಾಪ್ತಿಯ ಯುನಿಟ್ ಗಳ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಹಾರಿಸ್ ಅಡ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.