ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಮಾಲೂರು ತಾಲ್ಲೂಕು ಶಾಖೆಯ ವತಿಯಿಂದ ಅಪೋಲೊ ಮತ್ತು ಮೆಡಾಫಾರಂ ಕಂಪನಿ ಹಟಾವೋ ಮಾಲೂರು ತಾಲ್ಲೂಕು ಬಚಾವೋ ಮೂಲಕ ಮಾಲೂರು ತಾಲ್ಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾದ ಎಸ್.ಎಂ.ವೆಂಕಟೇಶ್ ರವರು ಮಾತನಾಡಿ ” ಮಾಲೂರು ತಾಲ್ಲೂಕಿಗೆ ಕೈಗಾರಿಕೆಗಳು ಬಂದಾಗ ನಿರುದ್ಯೋಗಸ್ಥರಿಗೆ ಉದ್ಯೋಗ ಸೀಗುತ್ತದೆ, ರೈತರ ಜಮೀನುಗಳಿಗೆ ಚಿನ್ನದ ಬೆಲೆ ಸೀಗುತ್ತದೆ, ಕಂಪನಿಗಳ ಸಿ.ಎಸ್.ಆರ್ ನಿಧಿಯಿಂದ ಗ್ರಾಮಗಳನ್ನು ದತ್ತು ಪಡೆದು ಹಳ್ಳಿಗಳ ಅಭಿವೃದ್ದಿ ಅಗುತ್ತದೆ ಎಂಬ ಆಶಾಭಾವನೆಯಿಂದ ಸಂತಸ ವ್ಯಕ್ತಪಡಿಸಿದರು. ಆದರೆ ಕೈಗಾರಿಕೆಗಳಿಂದ ಹೊರ ಬರುವ ತ್ಯಾಜ್ಯ, ವಿಷಯುಕ್ತ ಅನಿಲ ಪದಾರ್ಥಳನ್ನು ಕೆರೆ, ಕುಂಟೆ, ಹಾಳು ಬಾವಿ, ಅರಣ್ಯ ಪ್ರದೇಶಗಳಿಗೆ ರಾತ್ರಿಯ ಸಮಯದಲ್ಲಿ ತಂದು ಸುರಿದು ರೈತರ ಹಾಗೂ ಸಾರ್ವಜನಿಕರ ಸಾವು-ನೋವುಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಇದನ್ನು ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸಿ ಸಮಸೈ ಬಗೆಹರಿಸಬೇಕು” ಎಂದರು.
ಜಿಲ್ಲಾ ಸಹ ಸಂಚಾಲಕರಾದ ಚವ್ವೇನಹಳ್ಳಿ ವಿಜಿ ಮಾತನಾಡಿ ” ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನೆಪಕ್ಕೆ ಮಾತ್ರ, ಅಪೋಲೋ ಕಂಪನಿಗೆ ನೋಟಿಸ್ ನೀಡಿ ಕೈ ಚೆಲ್ಲಿ ಕುಳುತ್ತಿರುವುದು “ಮನೆಯ ಓಡೆಯನೇ ಕಳ್ಳನಾದರೆ ಮನೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚುವುದು” ಹೇಗೆ ಎಂಬಂತಾಗಿದೆ ಈ ಸಮಸೈ ಬಗೆಹರಿಸುವವರೆಗೂ ಕಂಪನಿಯ ಮುಂಭಾಗ ಆಹೋರಾತ್ರಿ ಪ್ರತಿಭಟನೆ ಮಾಡಲಾಗುವುದು” ಎಂದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಸಹ ಸಂಚಾಲಕ ಬಂಡಹಟ್ಟಿ ನಾರಾಯಣಸ್ವಾಮಿ, ತಿರುಮಲೇಶ್, ಖಜಾಂಜಿ ಶ್ಯಾಮಣ್ಣ, ಸಂತೆ ಕೃಷ್ಣಪ್ಪ, ಯಶವಂತಪುರ ಮುನಿರಾಜ್, ಜ್ವಾಲಾಮುಖಿ ಸತೀಶ್, ಮಾಕಾರಹಳ್ಲಿ ಆಂಜಿ, ಅರ್ಜುನ್, ಶಂಕರ್, ರಮೇಶ್, ಮಂಜುನಾಥ್, ಶಶಿ, ಮುರಳಿ, ಗೋಪಿ ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.