ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ):ಅಮಾಸೆಬೈಲು ಪೋಲಿಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯನ್ನು ಅಮಾಸೆಬೈಲು ಪೋಲಿಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಗ್ರಾಮದ ಕಾರೂರು ಪರಿಶಿಷ್ಟರ ಕಾಲೋನಿಯಲ್ಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸುಬ್ಬಣ್ಣ ಬಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಚಿಕ್ಕ ಬೆಳಾರಿ ಅವರು ವಹಿಸಿದ್ದರು, ಸಭೆಯಲ್ಲಿ ಅಮಾಸೆಬೈಲು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸುಬ್ಬಣ್ಣ ಬಿ ಅವರು ಮಾತನಾಡಿ ತಮಗೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ನಮ್ಮನ್ನು ಸಂಪರ್ಕಿಸಿ ನಾವೇ ಖುದ್ದಾಗಿ ನಿಮ್ಮಲ್ಲಿಗೆ ಬಂದು ನಿಮ್ಮ ದೂರನ್ನು ಸ್ವೀಕರಿಸಿ ಪರಿಹಾರ ನೀಡುತ್ತೇವೆ,ಯಾವುದೇ ಕಾರಣಕ್ಕೂ ಪೋಲೀಸರನ್ನು ಕಂಡಾಗ ಭಯಪಡಬಾರದು ಪೋಲೀಸರು ಮತ್ತು ಸಾರ್ವಜನಿಕರ ನಡುವೆ ನೇರ ಸಂಪರ್ಕ ಇರಬೇಕು, ಮತ್ತು ವಾಹನಗಳನ್ನು ಓಡಿಸುವಾಗ ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡುವುದರೊಂದಿಗೆ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ದಾಖಲೆಗಳು ಸರಿಯಾಗಿ ಇರಬೇಕು,ದಾಖಲೆಗಳು ಸರಿಯಾಗಿಲ್ಲದೇ,ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ,ದಾಖಲೆಗಳಿಲ್ಲದೇ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ ವಾಹನಗಳನ್ನು ಓಡಿಸುವಾಗ ನಮ್ಮ ಕೈಗೆ ಸಿಕ್ಕಿದಲ್ಲಿ ಮುಲಾಜಿಲ್ಲದೆ ದಂಡ ವಿಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಇದು ಸರ್ಕಾರದ ಆದೇಶ ಎಂದು ಜಾಗ್ರತಿ ಮೂಡಿಸುವುದರೊಂದಿಗೆ ಸಮುದಾಯದವರ ಮನ ಮುಟ್ಟುವ ರೀತಿಯಲ್ಲಿ ತಿಳುವಳಿಕೆ ನೀಡಿ ವಿವರಿಸಿದರು. ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯದವರಿಗಿರುವ ಕಾನೂನಿನ ವಿವರಣೆ ನೀಡಿದರು, ಸಮುದಾಯದ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದರು.ಈ ಸಂದರ್ಭ ದಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಉಮೇಶ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಶಂಕರ, ಹೆಡ್ ಕಾನ್ಸ್ಟೇಬಲ್ ಪ್ರದೀಪ್, ಪೋಲಿಸ್ ಕಾನ್ಸ್ಟೇಬಲ್ ನವೀನ್, ದಲಿತ ಮುಖಂಡರಾದ ಕೆ ಆನಂದ ಕಾರೂರು, ಹಿರಿಯರಾದ ಚಿಕ್ಕ ಬೆಳಾರಿ,ಶ್ರೀಕಾಂತ್, ರವೀಂದ್ರ, ಅನೂಪ್, ಮನೋಹರ,ಗಣೇಶ, ನಾರಾಯಣ, ನಾಗು,ನವೀನ, ಸಿದ್ದು, ಪದ್ದು,ಉಷಾ,ಗಣೇಶ, ಭಾರತಿ,ಶಿಲ್ಪಾ, ರಾಘವೇಂದ್ರ, ಅಜೀತ ಮುಂತಾದವರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.