ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):– ಸುಂದರೀಕರಣಗೊಳಿಸುತ್ತಿರುವ ಕೋಲಾರದ ಅಮಾನಿಕೆರೆಯ ಮಧ್ಯಭಾಗದಲ್ಲಿ ವಿಶ್ವಶಾಂತಿಧೂತ ಭಗವಾನ್ ಬುದ್ಧನ 101 ಅಡಿಗಳ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಪ್ರವಾಸಿ ತಾಣವಾಗಿಸಲು ಒತ್ತಾಯಿಸಿ ಭಾರತೀಯ ದಲಿತ ಸೇನೆಯ ರಾಜ್ಯಾಧ್ಯಕ್ಷ ಬಿ.ಡಿ.ಎಸ್ ನಾರಾಯಣಸ್ವಾಮಿರವರು ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಿ.ಜೆ.ಪಿ. ಸರ್ಕಾರದ ಪ್ರೋತ್ಸಾಹದಿಂದ ಮತ್ತು ಸಂಸದರಾದ ಎಸ್.ಮುನಿಸ್ವಾಮಿಯವರ ಆಸಕ್ತಿ ಮತ್ತು ಪರಿಶ್ರಮದ ಪರಿಣಾಮವಾಗಿ ಕೋಲಾರದ ಹೃದಯ ಭಾಗದಲ್ಲಿರುವ 699 ಎಕರೆಗಳ ವಿಸ್ತೀರ್ಣದ ಕೋಲಾರದ ಅಮಾನಿಕೆರೆಯನ್ನು ಸುಮಾರು 8 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಂದರೀಕರಣಗೊಳಿಸುವ , ವಾಕಿಂಗ್ ಪಾತ್ , ಬೋಟಿಂಗ್ ಕ್ಲಬ್ ಸ್ಥಾಪಿಸಿ ಸುಂದರ ಪ್ರವಾಸಿ ತಾಣವನ್ನಾಗಿ ಮಾಡುವ ಕಾಮಗಾರಿಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ.
ಈ ಕೆರೆಯ ಮಧ್ಯ ಭಾಗದಲ್ಲಿ ವಿಶ್ವದ ಶಾಂತಿಧೂತ ಭಾರತದ ಪ್ರಾಚೀನ ಬುದ್ಧ ಸಂಸ್ಕೃತಿಯ ಸ್ಟಾಪಕ ಮತ್ತು ಪ್ರತಿಪಾದಕರಾದ ಶ್ರೀ ಭಗವಾನ್ ಬುದ್ಧನ 101 ಅಡಿಗಳ ಎತ್ತರದ ಪ್ರತಿಯನ್ನು ಸ್ಥಾಪಿಸಿದಲ್ಲಿ ಇದರ ದರ್ಶನವನ್ನು ಪಡೆಯಲು , ಕೆರೆಯ ಮಧ್ಯಭಾಗದಲ್ಲಿ ನಿಂತು ನೀರು ತುಂಬಿದ ಕೆರೆಯ ಸೊಬಗನ್ನು ನೋಡಲು ಮತ್ತು ಆಹ್ವಾದಿಸಲು ಪ್ರವಾಸಿಗರಿಗೆ ಆಕರ್ಶಣೀಯ ಸ್ಥಳವಾಗಲಿದೆ . ಇದು ಹೆಚ್ಚಿನ ಜನರನ್ನು ಆಕರ್ಷಿಸಲು ಸಹ ಸಹಕರಿಯಾಗಲಿದೆ.
ತಮ್ಮ ಅವಧಿಯಲ್ಲಿ ಇದಕ್ಕೆ ಚಾಲನೆ ನೀಡಿದಲ್ಲಿ ತಮ್ಮ ಹೆಸರು ಚಿರಸ್ಥಾಯಿಂದಾಗಿ ಕೋಲಾರ ಜಿಲ್ಲೆಯು ಜನಮನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಆದ ಕಾರಣ ಸುಮಾರು 101 ಅಡಿಗಲ ಎತ್ತದ ಶ್ರೀ ಭಗವಾನ್ ಬುದ್ಧನ ಪ್ರತಿಯನ್ನು ಕೆರೆಂರು ಮಧ್ಯಭಾಗದಲ್ಲಿ ಸ್ಥಾಪಿಸಲು ತಾವು ಕ್ರಮ ತೆಗೆದುಕೊಂಡು ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಬಿ ಡಿ ಎಸ್ ನಾರಾಯಣಸ್ವಾಮಿರವರು ಗೌರವ ಪೂರ್ವಕವಾಗಿ ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.