(www.vknews.com) : 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜನನಾಯಕಿ , ಬಡವರ ಬಂಧು ಸುಮತಿ ಎಸ್ ಹೆಗ್ಡೆ ಇವರ ನೇತೃತ್ವದಲ್ಲಿ ಇಂದು ಮಂಗಳೂರಿನ ಸುಮ ಸದನ ದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು , ಸುಮತಿ ಎಸ್ ಹೆಗ್ಡೆ ಇವರು ಸಮಾಜಕ್ಕೆ ಪೂರ್ವಿಕರ ತ್ಯಾಗವನ್ನು ನಾವು ಸದಾ ನೆನೆದು ಅವರಂತೆ ಸಮಾಜಕ್ಕೆ ನಾವೆಲ್ಲರೂ ಉತ್ತಮ ಉದಾಹರಣೆಯಾಗಬೇಕು ಎಂದು ಸಂದೇಶ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸದಾಶಿವ ಹೆಗ್ಡೆ ಶಿವಾನಂದ ಎಸ್.ಎಂ,ಅಲ್ತಾಫ್ ತುಂಬೆ, ಹರ್ಷಿತ ಪಿ.ಆರ್.ಒ, ಶಾಲಿನಿ ಉಪಸ್ಥಿರಿದ್ದರು. 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಮಹಿಳಾ ಘಟಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ ರಕ್ತನಿಧಿಯ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ಶನಿವಾರದಂದು ಮಲ್ಲಿಕಟ್ಟೆಯ ಸುಮಾ ಸದನ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಕೊರೋನ ಮುಂಜಾಗೃತಾ ಕ್ರಮವನ್ನು ಪಾಲಿಸಿ ಕೊಂಡು ನಡೆದ ಕಾರ್ಯಕ್ರಮದಲ್ಲಿ ಒಟ್ಟು 26 ಜನಸ್ನೇಹಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವ ಕಾರುಣ್ಯ ಸೇವೆಯಲ್ಲಿ ಪಾಲ್ಗೊಂಡರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಮಿತಾ ಹೆಗ್ಡೆಯವರು ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮವನ್ನು ಅಬಕಾರಿ ಇಲಾಖೆಯ ಅಧೀಕ್ಷಕರಾದ ಎಂ.ಎಸ್ ಸದಾಶಿವ ಹೆಗ್ಡೆಯವರು ಉದ್ಘಾಟನೆಗೈದರು.
ಅತಿಥಿಗಳಾಗಿ ಇಕ್ಬಾಲ್ ಪರ್ಲಿಯ, ಡಾ| ಸಿಜಿ ತೋಮಸ್,ಶಿವಾನಂದ ಎಸ್.ಎಂ,ಅಲ್ತಾಫ್ ತುಂಬೆ, ಹರ್ಷಿತ ಪಿ.ಆರ್.ಒ, ಶಾಲಿನಿ,ಖೈರುನ್ನೀಸಾ,ನಿರ್ಮಲಾ, ಪ್ರಿಯಾ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ರಿಯಾಝ್ ಕಣ್ಣೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊರೋನಾ ಸಂಧಿಗ್ಧ ಪರಿಸ್ಥಿತಿಯಲ್ಲೂ ರೋಗಿಗಳ ಅವಶ್ಯಕತೆಗಾಗಿ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ದಾನಿಗಳಿಗೂ, ಕೆ.ಎಂ.ಸಿ ಆಸ್ಪತ್ರೆ ರಕ್ತನಿಧಿಯ ಸಿಬ್ಬಂಧಿಗಳಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಜನಸ್ನೇಹಿಗಳಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಂಘಟಕರು ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಜೆಡಿಎಸ್ ರಾಜ್ಯ ಆಯೋಜಕರಾದ ಶಿವಾನಂದ ಎಸ್.ಎಂ ರವರು ನಿರೂಪಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.