ಪುತ್ತೂರು (www.vknews.com) : ಅ 15 ಸ್ವಾತಂತ್ರೋತ್ಸವದ ಅಂಗವಾಗಿ ವಿದ್ಯಾ ಸಂಪತ್ತಿನಿಂದ ಸಮುದಾಯ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತ ಸಮಯದಲ್ಲಿ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸದಲ್ಲಿ ವಿಶಿಷ್ಟ ರೀತಿಯ ಸಾಧನೆ ಮಾಡಿದ ಊರಿನ ವಿದ್ಯಾರ್ಥಿಗಳನ್ನು ಗುರುತಿಸಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ SKSSF TRAND ದಕ್ಷಿಣ ಕನ್ನಡ ಜಿಲ್ಲಾ ನಾಯಕರಾಗಿರುವ ಯೂಸುಫ್ ಮುಂಡೋಳೆಯವರು ಮಾತನಾಡಿ , “ಶಿಕ್ಷಣಕ್ಕೆ ಒತ್ತು ನೀಡುವ ಈ ಸಂಪ್ರದಾಯ ಅಭಿನಂದನಾರ್ಹವಾಗಿದೆ” ಎಂದು ಹೇಳಿದರು . ಪ್ರತಿವರ್ಷ ಲೌಖಿಕ ಹಾಗೂ ಧಾರ್ಮಿಕ ಕ್ಷೇತ್ರದ ವಿದ್ಯಾಭ್ಯಾಸದಲ್ಲಿ ವಿಶಿಷ್ಟ ಸಾಧನೆ ಮಾಡುವ ಊರಿನ ವಿದ್ಯಾರ್ಥಿಗಳನ್ನು ಗುರುತಿಸಿ ಆಗಸ್ಟ್ 15ರಂದು ಅವಾರ್ಡ್ ನೀಡಿ ಗೌರವಿಸಲಾಗುವುದು ಎಂದು ಘೋಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಮರ್ ಉಸ್ತಾದ್ ನಂಜೆ ಅವರು ಪ್ರಾರ್ಥನೆಗೈದರು, ಎಸ್ಕೆಎಸ್ಸೆಸ್ಸೆಫ್ ಕಟ್ಟತ್ತಾರು ಶಾಖೆಯ ಅಧ್ಯಕ್ಷರಾಗಿರುವ ರಶೀದ್ ಯಮಾನಿ ರವರು ಉದ್ಘಾಟಿಸಿ ಮಾತನಾಡಿದರು, ಕ್ಯಾಂಪಸ್ ವಿಂಗ್ ಅಧ್ಯಕ್ಷರಾದ ಝೀಯಾದ್ ನಂಜೆ ರವರು ಅವಾರ್ಡ್ನ ಕುರಿತಾದ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ SKSSF ಕ್ಯಾಂಪಸ್ ವಿಂಗ್ ಜಿಲ್ಲಾ ನಾಯಕರಾದ ಆಶಿಕ್ ಮುಂಡೋಳೆ ಅತಿಥಿಯಾಗಿ ಭಾಗವಹಿಸಿದ್ದರು.
ಈ ವರ್ಷ ಎಂಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಾರ್ಡ್ ನೀದಲಾಯಿತು ಹಾಗೂ ವಾಫಿ ಪ್ರವೇಶ ಪರೀಕ್ಷೆ ಯಲ್ಲಿ ಪ್ರಥಮ ರಾಂಕ್ ಪಡೆದ ಹಾಫಿಲ್ ಬುರ್ಹಾನ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ನ ಹಿರಿಯ ಸದಸ್ಯರಾದ ಇಸ್ಮಾಯಿಲ್ ಮೌಲವಿ, ಬಶೀರ್ ನಂಜೆ, ಹಾಗೂ ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಶರೀಫ್ ನಿಡ್ಯಾಣ, ಮತ್ತು ಕ್ಯಾಂಪಸ್ ವಿಂಗ್ ಪದಾಧಿಕಾರಿಗಳಾದ ಫಕ್ರುದ್ದೀನ್, ಶಮೀನ್ ,ಹಾಶಿಮ್ ಹಾಗೂ ಸ್ವಾಲಿಹ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಎಸ್ ಕೆ ಎಸ್ ಎಸ್ ಎಫ್ ಕಟ್ಟತ್ತಾರು ಶಾಖಾ ಕಾರ್ಯದರ್ಶಿಯಾಗಿರುವ ಎ ಎಂ ಮುಸ್ತಫ ಕಟ್ಟತ್ತಾರು ರವರು ಸ್ವಾಗತಿಸಿ.ಹೈದರ್ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.