ಸೋಮೇಶ್ವರ ಉಚ್ಚಿಲ(ವಿಶ್ವಕನ್ನಡಿಗ ನ್ಯೂಸ್): ಎಸ್.ಡಿ.ಪಿ.ಐ ವತಿಯಿಂದ ಉಚ್ಚಿಲ ಗುಡ್ಡೆ ಜಂಕ್ಷನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಷ್ಟ್ 15’ರಂದು ಬೆಳಿಗ್ಗೆ 7’ಘಂಟೆಗೆ ಸರಿಯಾಗಿ ಉಚ್ಚಿಲ ಗುಡ್ಡೆ ಜಂಕ್ಷನ್ನಲ್ಲಿ SDPI ಸೋಮೇಶ್ವರ ಪುರಸಭಾ ಸಮಿತಿ ಅಧ್ಯಕ್ಷರಾದ ಮೊಯ್ದಿನ್ ಕುಟ್ಟಿ ತಲಪ್ಪಾಡಿ ಧ್ವಜಾರೋಹಣ ಕಾರ್ಯವನ್ನು ನೆರವೇರಿಸಿದರು.
ಮುಖ್ಯ ಭಾಷಣಗಾರ ಇಭ್ರಾಹಿಂ UM (ಲಿಮ್ರಾ)ರವರು ಸಭೆಯನ್ನುದ್ದೇಶಿಸಿ ನಾವೆಲ್ಲ 75ನೇ ಸ್ವಾತಂತ್ರ್ಯ ದಿನಾಚರನೆ ಆಚರಿಸುತ್ತಿದ್ದೇವೆ.ಜಾತಿ ಮತ ಭೇದ ಮರೆತು ಭಾರತೀಯರೆಲ್ಲರೂ ಒಂದಾಗಿ ಆಚರಿಸುತ್ತಿದ್ದೇವೆ.ನಮ್ಮ ಹಿರಿಯರು ಮಾಡಿರುವ ತ್ಯಾಗವನ್ನು ಸ್ಮರಿಸುತ್ತೇವೆ. ಭ್ರಿಟಿಷರನ್ನು ಈ ದೇಶದಿಂದ ಓಡಿಸಲು ಅವರು ಮಾಡಿರುವ ಹೋರಾಟಗಳೇ ನಮಗೆ ಪ್ರೇರಣೆ. ಈವಾಗ ಸ್ವತಂತ್ರ್ಯದ ಸಂಭ್ರಮವಿದ್ದರೂ ಅಘೋಷಿತ ಕರ್ಪೂ ಅಥವಾ ಲಾಕ್ಡೌನ್ ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಲಾಕ್ಡೌನ್ ಹೇರುವ ಮೂಲಕ ಕೊರೋಣ ಸಂಪೂರ್ಣ ಇಲ್ಲವಾಗುತ್ತೆಂದು ಜನರನ್ನು ನಂಬಿಸಿದರೆ ಕೊರೋನ ನಾಶವಾಗದೆ ಜನರ ಬದುಕೇ ನಾಶವಾಯ್ತು. ಇಡೀ ದೇಶವನ್ನು ಖಾಸಾಗಿಯವರಿಗೆ ಮಾರಲು ಹೊರಟಿರುವ ಸರಕಾರ ಜನರ ಗಮಣವನ್ನು ಬೇರೆಡೆಗೆ ಹರಿಸುವುದಕ್ಕಾಗಿ ಕೋರೋಣವನ್ನು ಜೀವಂತ ಉಳಿಸುವುದಕ್ಕೆ ಯತ್ನಿಸುತ್ತದೆ ಹಾಗೆಯೇ ಜನರ ಸ್ವಾತಂತ್ರ್ಯವನ್ನು ನೇರವಾಗಿ ಬಹಿರಂಗವಾಗಿ ಹತ್ತಿಕ್ಕಲು ಪ್ರಯತ್ನಿಸುತ್ತೆಂದರು.
ಈ ಸಂದರ್ಭದಲ್ಲಿ ಸಿದ್ದೀಕ್ ಉಚ್ಚಿಲ್ ಜಾಫರ್ ಅಜ್ಜಿನಡ್ಕ, ಇಮ್ತಿಯಾಝ್ ಉಚ್ಚಿಲ್, ಹಾಶಿಂ ಉಚ್ಚಿಲ್, ಸಲಾಂ ಅಜ್ಜಿನಡ್ಕ, ಷರೀಫ್ ತಲಪ್ಪಾಡಿ ಹಸನ್,ಅಝರ್ ಮತ್ತು ಊರಿನ ಹಿರಿಯರಾದ ಕರೀಂ ಜಿ ಉಚ್ಚಿಲ್, ಹಸನಬ್ಬ ಉಚ್ಚಿಲ್, ಮತ್ತು ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಉಪಸ್ಥಿತರಿದ್ದರು.
ಅಬ್ದುಲ್ ಅಝೀಝ್ ಸ್ವಾಗತಿಸಿದರು, ಅಬ್ದುಲ್ ನಝೀರ್ U.G ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.