ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ. ಎಲಿಮಲೆ ಇದರ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಎಲಿಮಲೆ ಮಸೀದಿ ವಠಾರದಲ್ಲಿ ಜರಗಿತು.
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿ ಬಲಿದಾನ ನೀಡಿದ ವೀರರ ಅನುಸ್ಮರಣೆ ಹಾಗೂ ಅವರಿಗಾಗಿ ವಿಶೇಷ ಪ್ರಾರ್ಥನೆಯನ್ನು ಎಲಿಮಲೆ ಸದರ್ ಮುಅಲ್ಲಿಮ್ ಮಹಮೂದ್ ಸಖಾಫಿಯವರು ನೆರವೇರಿಸಿದರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ನುಸ್ರತ್ ಅಧ್ಯಕ್ಷರಾದ ಲತೀಫ್ ಹರ್ಲಡ್ಕ ರವರು ಧ್ವಜಾರೋಹಣಗೈದರು.
ಜೀರ್ಮಕ್ಕಿ ಮಸೀದಿಯ ಇಮಾಮರಾದ ಸೂಫಿ ಮುಸ್ಲಿಯಾರ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾತಂತ್ರ್ಯೋತ್ಸವದ ಸುವರ್ಣ ಸಂಭ್ರಮದ ಪ್ರಯುಕ್ತ ಎಲಿಮಲೆ ಮಸೀದಿ ವ್ಯಾಪ್ತಿಯ ಮದ್ರಸಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಏರ್ಪಡಿಸಲಾದ ಸ್ವಾತಂತ್ರ್ಯದ ಕುರಿತು ಅರಿವು ಮೂಡಿಸುವ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಎಲಿಮಲೆ ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ, ಮಸೀದಿ ಸಮಿತಿಯ ಕೋಶಾಧಿಕಾರಿ ಮಹಮ್ಮದ್ ಕುಂಞಿ ಮೇಲೆಬೈಲುರವರು ಬಹುಮಾನ ವಿತರಿಸಿದರು. ಮೆತ್ತಡ್ಕ ಸದರ್ ಮುಅಲ್ಲಿಂ ಶಫೀಕ್ ಹನೀಫಿ ರವರು ಉಪಸ್ಥಿತರಿದ್ದರು.
View this post on Instagram A post shared by VK News (@vknews_media)
A post shared by VK News (@vknews_media)
ಸೂಫಿ ಎಲಿಮಲೆ ಸ್ವಾಗತಿಸಿ ಅಶ್ರಫ್ ದಿನಸಿ ಬಜಾರ್ ವಂದಿಸಿದರು.ಕೋವಿಡ್ ನಿಯಮಗಳನ್ನು ಪಾಲಿಸಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಗೀತೆ ಹಾಡಿ ಸಿಹಿ ಹಂಚಿ ಸಂಭ್ರಮದಿಂದ ಆಚರಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.