ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯನ್ನು ಮೂಡ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದ ಆರ್ಧಿಕ ಪರಿಸ್ಥಿತಿಯು ಸುಧಾರಣೆ ಕಾಣುತ್ತಿದ್ದು ಕೋವಿಡ್-19 ಇರುವ ಕಾರಣ ದೇಶದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ದೇಶದ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಸೈನಿಕರು, ಅಂತರಿಕ ಮತ್ತು ಬಾಹ್ಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಬಿ.ಎಸ್.ಎಫ್, ಸಿ.ಎಸ್.ಆರ್.ಎಫ್ ಸಿಬ್ಬಂದಿಗಳು ಮತ್ತು ಪೊಲೀಸ್ ಪಡೆಗಳ ಕಾರ್ಯ ಶ್ಲಾಘನೀಯವಾದದ್ದುಎಂದರು.
ಈ ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮೂಡಾ ಆಯುಕ್ತ ಎನ್. ಮಾಣಿಕ್ಯ, ಡಿ.ಸಿಆರ್.ಎಫ್ ಇಲಾಖೆಯ ಎಸ್.ಪಿ ಕುಮಾರಸ್ವಾಮಿ ಎಸ್.ಜೆ, ಸೈಬರ್ಕ್ರೈಮ್ ಇಲಾಖೆಯ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಎ.ಸಿ.ಬಿಯ ಎಸ್.ಪಿ ಸಿ.ಎ ಸೈಮನ್, ಡಿ.ವೈ.ಎಸ್.ಪಿ ಕೆ.ಸಿ ಪ್ರಕಾಶ್, ಕೇಂದ್ರ ಜಿ.ಎಸ್.ಟಿ ಯ ಎ.ಸಿ. ಮಧುಸೂದನ್ ಭಟ್ ಮತ್ತು ಮೂಡಾ ಟಿ.ಪಿ.ಎಮ್ ವೇಣು ಗೋಪಾಲ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.