ಬೆಂಗಳೂರು (www.vknews.com) : ರಾಜ್ಯದಲ್ಲಿ ಪ್ರವಾಹ, ಕರೋನಾ ಮತ್ತು ಲಾಕ್ಡೌನ್ ಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೋವಿಡ್ ರೂಲ್ಸ್ ಉಲಂಘನೆ ಮಾಡಿಕೊಂಡು, ಜನರಿಗೆ ಬೇಡವಾದ ಜನಾಶಿರ್ವಾದದ ಹೆಸರಲ್ಲಿ ಬಿಜೆಪಿ ಕೇಂದ್ರ ಮಂತ್ರಿಗಳು ಮಾಡುತ್ತಿರುವ ಯಾತ್ರೆ ಜನರ ನೋವಿನ ಮೇಲೆ ಉಪ್ಪು ಸುರಿಯುವ ಕೆಲಸವೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೈನ್ ಟೀಕಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಘೋಶಿಸಿದ ಎಲ್ಲ ಪ್ಯಾಕೇಜ್ ಗಳು ಕೇವಲ ಪ್ರಚಾರದ ಮಾತುಗಳು. ಇನ್ನು ತನಕ ಪರಿಹಾರ ಧನ ಯಾರಿಗೂ ತಲುಪಲಿಲ್ಲ. ಅತ್ತ ಮಳೆ ಇಂದ ರಾಜ್ಯದಲ್ಲಿ ಸುಮಾರು 2 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. 1228 ಮನೆಗಳು ಸಂಪೂರ್ಣ ನಾಶ ವಾಗಿವೆ. ಸಾವಿರಾರು ಜನ ಸೂರಿಲ್ಲದೆ ಬೀದಿಪಾಲು ಆಗಿದ್ದಾರೆ. 2019ರಲ್ಲಿ ಪ್ರವಾಹದಿಂದ ₹ 38,451 ಕೋಟಿ ನಷ್ಟವಾಗಿದ್ದು, ಕೇಂದ್ರದಿಂದ ₹1,869 ಕೋಟಿ ಮಾತ್ರ ಪರಿಹಾರದ ಹಣ ಲಭ್ಯವಾಗಿದೆ. 2020ರಲ್ಲಿ ₹ 15,410 ಕೋಟಿ ನಷ್ಟವಾಗಿದ್ದು, ಪರಿಹಾರವಾಗಿ ಕೇವಲ ₹ 1,206 ಕೋಟಿ ದೊರೆತಿದೆ.
ಈ ವರ್ಷದ ನಷ್ಟದ ಅಂದಾಜು ಮಾಡುವ ಕೆಲಸವೂ ಆಗಿಲ್ಲ 25 ಜನ ಬಿಜೆಪಿ ಸಂಸದರು, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ವಿದ್ದರೂ ಇನ್ನು ತನಕ ಪರಿಹಾರ ಮೊತ್ತ ತರುವಲ್ಲಿ ವಿಫಲವಾಗಿರುವುದು ದುರಂತವೇ ಸರಿ. ಬಿಜೆಪಿ ರಾಜ್ಯದ ಜನರಿಂದ ಕ್ಷಮೆ ಯಾಚನೆ ಯಾತ್ರೆ ಮಾಡಬೇಕೆ ವಿನಃ ಪರಿಚಯ ಯಾತ್ರೆ ಅಲ್ಲ ಎಂದು ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
ಕರೋನಾ ಮೂರನೇ ಅಲೆ ಬಗ್ಗೆ ಜನ ಆತಂಕ ದಲ್ಲಿ ಇದ್ದಾರೆ. ಅಂತದ್ದರಲ್ಲಿ ಈ ರೀತಿಯ ಯಾತ್ರೆಗಳು ಮಾಡುವುದು ಮೂರ್ಖತನ. ಈ ರೀತಿಯ ದೊಂಬರಾಟಗಳನ್ನು ನಿಲ್ಲಿಸಿ ಕೂಡಲೇ ಜನರ ಧಾವಿಸಿದರೆ ಜನ ಗುರುತಿಸುತ್ತಾರೆ. ಇಲ್ಲದಿದ್ದರೆ ಬರುವ ದಿನಗಳಲ್ಲಿ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.