ಮಂಗಳೂರು (www.vknews.com) : ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಆಫ್ ಇಂಡಿಯಾ ಮತ್ತು ಎಸ್.ಕೆ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ) ಮಂಗಳೂರು ಕೊರೋನ ಸಂದರ್ಭದಲ್ಲಿ ಮಿಡಿದವರಿಗೆ ಕೊಡಮಾಡುವ “ಅಪ್ರತಿಮ ಭಾರತೀಯ ಪ್ರಶಸ್ತಿ – 2021″( ICONIC INDIAN AWARD) ಗೆ ಮುನ್ನೂರು ಗ್ರಾಮದ ಕುತ್ತಾರು ಅಬ್ದುಲ್ ಅಝೀಝ್ ಆರ್.ಕೆ.ಸಿ ಆಯ್ಕೆಯಾಗಿದ್ದಾರೆ.
ಆಗಸ್ಟ್ 19ರಂದು ಮಂಗಳೂರಿನ ಬೊಕ್ಕಪಟ್ಣ ಹಿನ್ನೀರಿನ ಅಬ್ಬಕ್ಕ ವಿಹಾರ ನೌಕೆಯಲ್ಲಿ ನಡೆಯುವ ಕೋವಿಡ್ ಕಾಲ ಘಟ್ಟದಲ್ಲಿ ಕಲಾವಿದರ ತಲ್ಲಣ ವಿಷಯದಲ್ಲಿ24ನೇ ಅಂತರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕೊರೊನ ಸೇನಾನಿಗಳಿಗೆ ಗೌರವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಅಬ್ದುಲ್ ಅಝೀಝ್ ಕುತ್ತಾರ್ ರವರು ಮುನ್ನೂರು ಗ್ರಾಮದ ಕುತ್ತಾರು ನಿವಾಸಿಯಾಗಿದ್ದು, ತನ್ನನ್ನು ತಾನು ಸಮಾಜ ಸೇವೆಯಲ್ಲಿ ತೊಡಗಿಸಿದ್ದು, ಮುನ್ನೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಬಂದಾಗ ಕೊಳವೆ ಬಾವಿ ನಿರ್ಮಿಸಿಕೊಟ್ಟಿದ್ದಾರೆ. ಕೊರೋನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬಿಲ್ ಪಾವತಿಸಲು ಅಸಾಧ್ಯವಾದ ರೋಗಿಗಳ ಬಿಲ್ ಪಾವತಿಸಿದ್ದಾರೆ. ಬಡ ಹಾಗೂ ಅಂಗನವಾಡಿ , ಅಶಾ ಕಾರ್ಯಕರ್ತರಿಗೆ ಕಿಟ್ ವಿತರಿಸಿದ್ದಾರೆ. ಎರಡು ತಿಂಗಳು ಕಾಲ ಆಶಾ ಕಾರ್ಯಕರ್ತರಿಗೆ ಕೋವಿಡ್ ಪ್ರದೇಶಗಳಿಗೆ ಹೋಗಲು ವಾಹನ ಮತ್ತು ಇತರ ವೆಚ್ಚ ನೀಡಿದ್ದಾರೆ. ಯು.ಟಿ.ಕೆ ಸಹಕಾರದೊಂದಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 400 ರೋಗಿಯ ಜೊತೆಯಲ್ಲಿ ಇರುವರಿಗೆ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ನೀಡಿದ್ದಾರೆ. ಅವರು ಮುನ್ನೂರು ಗ್ರಾ.ಪಂ ಸದಸ್ಯರೂ ಆಗಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.