ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ವಳತ್ತಡ್ಕ ಬೂತ್ ಸಮಿತಿ ವತಿಯಿಂದ ಕುಂಜೂರು ಪಂಜ- ಮೇಗಿನ ಪಂಜ ರಸ್ತೆಯ ಉದ್ದಗಲಕ್ಕೂ ಶ್ರಮದಾನ ನಡೆಯಿತು.
ಮಳೆಗಾಲದಲ್ಲಿ ರಸ್ತೆಯ ಸುತ್ತ ಮುತ್ತಲಿನ ಪರಿಸರ ಹುಲ್ಲು ರಾಶಿಯಾಗಿ ಬೆಳೆದು, ರಸ್ತೆಯಲ್ಲಿ ನಡೆಯಲು ಕಷ್ಟ ವಾಗುತ್ತಿತ್ರು, ಇದನ್ನು ಮನಗಂಡು ಎಸ್.ಡಿ.ಪಿ.ಐ ಕಾರ್ಯಕರ್ತರು ಶ್ರಮದಾನದ ಮೂಲಕ ಪರಿಸರವನ್ನು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ವಳತ್ತಡ್ಕ ಬೂತ್ ಅಧ್ಯಕ್ಷರಾದ ಶರೀಫ್ ಪಂಜ , ಕಾರ್ಯದರ್ಶಿ ಮುನೀರ್ ಮಲಬಾರ್, ಪಿ.ಎಫ್.ಐ ನಾಯಕರಾದ ಸಿರಾಜ್ ಪಂಜ, ನೌಫಲ್, ಹಾಗೂ ಹಲವಾರು ಕಾರ್ಯಕರ್ತರು ಸಹಕರಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.