(www.vknewes.com) : ಮಂಗಳೂರಿನ ಬಂಟ್ವಾಳ ತಾಲೂಕಿನ ಅಬ್ದುಲ್ ರಝ್ಝಾಕ್ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಕೆಲಸ ಮಾಡುತಿದ್ದ ವೇಳೆ ಮಾಲೀಕನು ಅಬ್ದುಲ್ ರಝ್ಝಾಕ್ ರವರ ಹೆಸರಲ್ಲಿ ಹೊಸ ಕಾರೊಂದನ್ನು ಕಂತಿನಲ್ಲಿ ಖರೀದಿಸಿ ಕೆಲವು ತಿಂಗಳುಗಳ ನಂತರ ಮಾಲೀಕನು ಆ ಕಾರನ್ನು ಅಬ್ದುಲ್ ರಝ್ಝಾಕ್ ರವರಿಗೆ ತಿಳಿಯದೇ ಬೇರೊಬ್ಬರಿಗೆ ಮಾರಾಟ ಮಾಡುತ್ತಾರೆ. ಹೊಸದಾಗಿ ಕಾರು ತೆಗೆದುಕೊಂಡವರು ಮಾಡಿದ ಕೆಲವು ತಪ್ಪುಗಳಿಂದ ವಾಹನದ ಮೇಲೆ ಬಂದ ಕೇಸ್ ಅಬ್ದುಲ್ ರಝ್ಝಾಕ್ ರವರ ಮೇಲೆ ಕೇಸ್ ದಾಖಲಾಗುತ್ತದೆ.
ಅಬ್ದುಲ್ ರಝ್ಝಾಕ್ ರವರು ತಪ್ಪೇನು ಮಾಡದಿದ್ದರೂ ಆ ಕಾರು ಇವರ ಹೆಸರಿನಲ್ಲಿ ನೊಂದಾವಣೆ ಆಗಿರುವುದರಿಂದ ಕಾನೂನಿನ ಮುಂದೆ ಇವರು ತಪ್ಪಿತಸ್ಥರಾಗುತ್ತಾರೆ. ಮಾಲಿಕನು ಮಾಡಿದ ಈ ವಂಚನೆಯಿಂದಾಗಿ ಸರಿಸುಮಾರು 27,000 ರಿಯಾಲ್ (5 ಲಕ್ಷ ರೂಪಾಯಿ) ನಷ್ಟು ದಂಡ ಕಟ್ಟ ಬೇಕಾದ ಸನ್ನಿವೇಶ ಎದುರಾಗಿತ್ತು.
ಹಲವರಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಈ ವಿಷಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ರವರ ಗಮನಕ್ಕೆ ಬಂದು ಇದನ್ನು ಕೆಸಿಎಫ್ ದಮ್ಮಾಮ್ ಝೋನಲ್ ಅಧೀನದಲ್ಲಿರುವ ಕೆಸಿಎಫ್ ಜುಬೈಲ್ ಸೆಕ್ಟರ್ ನೇತಾರರಿಗೆ ತಿಳಿಸುತ್ತಾರೆ.
ನಂತರ ಮುಹಮ್ಮದ್ ಮಲೆಬೆಟ್ಟು, ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷ ಫೈಸಲ್ ಕೃಷ್ಣಾಪುರ, ಜುಬೈಲ್ ಸೆಕ್ಟರ್ ನೇತಾರಾದ ನೌಫಲ್ ಮುಲ್ಕಿ, ಅಬ್ದುಲ್ ರಹ್ಮಾನ್ ಕೆಮ್ಮಾರ ಹಾಗೂ ಜುಬೈಲ್ ನಲ್ಲಿರುವ ಕೆಸಿಎಫ್ ಹಿತೈಷಿಗಳಾದ ಇಬ್ರಾಹಿಮ್ ಬಜ್ಪೆ (ಇಬ್ಬ) ರವರು ಈ ವಿಷಯವಾಗಿ ಜುಬೈಲ್ ನಲ್ಲಿ ಇರುವ ದಾನಿಗಳನ್ನು ಭೇಟಿಯಾಗಿ ಇದಕ್ಕೆ ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿದರು.ಬಳಿಕ ಮುಹಮ್ಮದ್ ಮಲೆಬೆಟ್ಟು ರವರ ನೇತ್ರತ್ವದಲ್ಲಿ ಅಗತ್ಯ ದಾಖಲೆಗಳನ್ನೆಲ್ಲಾ ಸರಿಪಡಿಸಿ ಅವರ ಮೇಲೆ ಮಾಡಲಾಗಿದ್ದ ಆರೋಪದಿಂದ ಅವರನ್ನು ಮುಕ್ತಗೊಳಿಸಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿ ನೇತಾರರು, ದಮ್ಮಾಮ್ ಝೋನಲ್ ಸಾಂತ್ವನ ಇಲಾಖೆಯ ಅಧ್ಯಕ್ಷ ಬಾಷಾ ಗಂಗಾವಳಿ ಸಹಿತ ಇತರ ನೇತಾರರು, ಜುಬೈಲ್ ಸೆಕ್ಟರ್ ನೇತಾರರು ಹಾಗೂ ದಾನಿಗಳ ಸಹಾಯದ ಕಾರಣದಿಂದಾಗಿ ಅಬ್ದುಲ್ ರಝ್ಝಾಕ್ ರವರು ಆಗಸ್ಟ್ 04ರಂದು ಬೆಳಿಗ್ಗೆ ಊರಿಗೆ ತಲುಪಿದ್ದಾರೆ. ಈ ಮಹತ್ಕಾರ್ಯಕ್ಕೆ ನೆರವಾದ ಎಲ್ಲರಿಗೂ ಕೆ,ಸಿ.ಎಫ್ ರಾಷ್ಟ್ರೀಯ ಸಮಿತಿ ಅಬಿನಂಧನೆ ಸಲ್ಲಿಸಿದೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.