ಮಂಗಳಾಂತಿ (www.vknews.com) : ಮಂಜನಾಡಿ ಯುವ ಕಾಂಗ್ರೆಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಿರಿಯ ಪ್ರಾಥಮಿಕ ಶಾಲೆ ಮಂಜನಾಡಿಯಲ್ಲಿ ಶಿಕ್ಷಕ ಶಿಕ್ಷಕಿಯರನ್ನು ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯ ವ್ಯಕ್ತಿಗಳು ಡಾ. ಸರ್ವಪಲ್ಲಿ ರಾಧಾಕೃಷ್ಣ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಸ್ರೀನ ಇಕ್ಬಾಲ್ ಆಗಮಿಸಿದರು. ಯವ ಕಾಂಗ್ರೆಸ್ ಅಧ್ಯಕ್ಷರಾದ ಅಶೀರುದ್ದೀನ್ ಸಾರ್ತಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರನ್ನು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಮಂಗಳಾಂತಿ ವಾರ್ಡ್ ಸದಸ್ಯ ಇಸ್ಮಾಯಿಲ್ ಬಾವುರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭಕೋರಿದರು.
ಮಂಜನಾಡಿ ಯುವ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಂದ ಶಿಕ್ಷಕ ಶಿಕ್ಷಕಿಯರಾದ ಶ್ರೀಮತಿ ನಿರ್ಮಲ ಅಮೀನ್, ನೀನಾ ಕುಮಾರಿ, ಕೃಪಾಶಂಕರಿ, ಶಶಿಕಲಾ , ಶೋಭಾ, ಚಿದಾನಂದ ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಯ ಸುರಕ್ಷ, ಭವ್ಯ ರಾಜೇಶ್ವರಿ, ಚೈತ್ರ ಲಕ್ಷ್ಮಿ, ಮತ್ತು ಕೆ. ಎಂ. ಕೆ ಮಂಜನಾಡಿ ರವರನ್ನು ಗುಲಾಬಿ ಹೂ, ಪುಸ್ತಕ ಮತ್ತು ಕಿರು ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಮತ್ತು ಕಾರ್ಯಕರ್ತರಿಗೆ ಹಿತನುಡಿಗಳನ್ನಾಡಿದರು. ಕೆ. ಎಂ ಕೆ ಮಂಜನಾಡಿ ಸಮಾರೋಪ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಅತ್ತಾವುಲ್ಲಾ, ಸಲೀಮಾ, ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಶ್ರಫ್ ಸಫಾ ಉಪಾಧ್ಯಕ್ಷ ನಿಝಾರ್ ಮಂಗಳಾಂತಿ, ಕಾರ್ಯದರ್ಶಿ ಸಫ್ವಾನ್ ಮಂಗಳ ನಗರ, ಯುವ ಕಾಂಗ್ರೆಸ್ ಆರಂಗಡಿ ಬೂತ್ ಕಾರ್ಯದರ್ಶಿ ಆಶಿರ್ ಅಜ್ಮೀರ್, ಕಾಂಗ್ರೆಸ್ ಕಾರ್ಯಕರ್ತ ಇಕ್ಬಾಲ್ ಮಂಗಳಾಂತಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ನಾಸಿರ್ ಮೈಸೂರು ನಿರೂಪಿಸಿದರು. ಕಾರ್ಯದರ್ಶಿ ಆಸಿಫ್ ಆರಂಗಡಿ ಧನ್ಯವಾದವಿತ್ತರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.