ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಕೋವಿಡ್ ವಾರಿಯರ್ ಆಗಿ ಜೀವದ ಹಂಗು ತೊರೆದು ದುಡಿದವರನ್ನು ಸ್ಮರಿಸುವ ಅಗತ್ಯವಿದೆ , ಸಂಕಷ್ಟದ ಸಂದರ್ಭದಲ್ಲೂ ಪ್ರತಿ ಮನೆಗೆ ಅಂಚೆ ತಲುಪಿಸಿದ ಅಂಚೆ ಕಚೇರಿ ಸಿಬ್ಬಂದಿಯ ಸೇವೆಯನ್ನು ಮರೆಯಲಾಗದು ಎಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಅಭಿಪ್ರಾಯಪಟ್ಟರು.
ನಗರದಲ್ಲಿ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಇಲಾಖೆಯ ಎಲ್ಲಾ ಸಿಬ್ಬಂದಿಗೆ ರೋಟರಿ ಸೆಂಟ್ರಲ್ ಹಾಗೂ ಸಿಎಂಆರ್ ಫೌಂಡೇಷನ್ನಿಂದ ಮಾಸ್ಟ್ಸ್ಯಾನಿಟೈಸರ್ , ತಂಪು ಪಾನಿಯ ವಿತರಿಸಿ ಅವರು ಮಾತನಾಡುತ್ತಿದ್ದರು. ಈಗಾಗಲೇ ಪತ್ರಕರ್ತರು , ತಾಲ್ಲೂಕಿನ ೧೮ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗೆ ತಂಪು ಪಾನೀಯಾ ಹಾಗೂ ಎನ್ -೯೫ ಮಾಸ್ಟ್ಗಳನ್ನು ವಿತರಿಸುವ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು. ಸಾವಿನ ಭಯದಿಂದ ಮನೆಯಿಂದ ಹೊರಬರಲು ಹೆದರುವ ಸಂದರ್ಭದಲ್ಲಿ ಮನೆಮನೆಗೂ ಪತ್ರ ತಲುಪಿಸಿದ್ದೀರಿ , ಸುದ್ದಿ ಶುಭವೇ ಆಗಿರಲಿ , ಅಶುಭವೇ ಆಗಿರಲಿ ತಲುಪಿಸುವ ನಿಮ್ಮ ಪ್ರಾಮಾಣಿಕತೆ ಶ್ಲಾಘನೀಯ ಎಂದರು.
ಜಿಲ್ಲಾ ಸೇವಾದಳ ಅಧ್ಯಕ್ಷ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ , ರೋಟರಿ ಸಿ ಎಂ ಆರ್ ಶ್ರೀನಾಥ್ ಅವರು ಪತ್ರಕರ್ತರು , ವೈದ್ಯರು , ಶುಶ್ಕಿಯರು , ಪೊಲೀಸರ ಜತೆ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ ಅಂಚೆ ಸಿಬ್ಬಂದಿಯನ್ನೂ ಸ್ಮರಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್ , ರೋಟರಿ ಸೆಂಟ್ರಲ್ನಿಂದ ಸಾವಿರಾರು ಮಂದಿಗೆ ನೆರವಾಗುವ ಸಂಕಲ್ಪ ನಮ್ಮದಾಗಿದೆ , ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಅನೇಕ ರೀತಿಯಲ್ಲಿ ನಾವು ಕೆಲಸ ಮಾಡಿದ್ದೇವೆ , ಆಮ್ಲಜನಕ ಸಿಗದೇ ಅನೇಕರು ಸಾವನ್ನಪ್ಪಿದ್ದನ್ನು ಮನಗಂಡು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯಕೇಂದಗಳಿಗೂ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸ ಮಾಡಿದ್ದೇವೆ ಎಂದರು. ಶಾಲೆಗಳಲ್ಲಿ ಮಕ್ಕಳಿಗೆ ಮಾಸ್ಕ್ ವಿತರಿಸಲಾಗಿದೆ , ಪರೀಕ್ಷಾ ಸಂದರ್ಭದಲ್ಲೂ ಮಾಸ್ಕ್ ಒದಗಿಸಲಾಗಿದೆ ಎಂದು ತಿಳಿಸಿ , ಕೋವಿಡ್ ಸಂದರ್ಭದಲ್ಲಿ ರೋಗಿಗಳ ಮನೆಗಳಿಗೆ ಹೋಗಿ ಔಷಧಿ ಕಿಟ್ ನೀಡಿದ ದಿಟ್ಟತನ ನಮ್ಮ ರೋಟರಿ ಅಧ್ಯಕ್ಷರು ಮಾಡಿದ್ದಾರೆ ಎಂದು ತಿಳಿಸಿದರು.
ಪೋಸ್ಟ್ ಮಾಸ್ಟರ್ ರಘುಪ್ರಸಾದ್ ಅಂಚೆ ಇಲಾಖೆ ಸಿಬ್ಬಂದಿಯ ಸೇವೆಯನ್ನು ಗಮನಿಸಿದ್ದಕ್ಕಾಗಿ . ಧನ್ಯವಾದ ಸಲ್ಲಿಸಿದರು . ಕಾರ್ಯಕ್ರಮದಲ್ಲಿ ಕೊಂಡರಾಜನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ , ಎಂ.ಮಂಜುನಾಥ್ , ಹೆಚ್.ಎನ್.ರಾಜು , ಎಸ್.ಆರ್.ಶಶಿಕುಮಾರ್ , ನರಸಿಂಹಪ್ಪ , ಶಶಿ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.