ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ವತಿಯಿಂದ ನಡೆಸಲುದ್ದೇಶಿಸಿದ ಸಾಂತ್ವನದ ಯೋಜನೆಯಾದ ಸಸಿ-2021 ಗೆ ಅಧಿಕೃತವಾಗಿ ಈಗಾಗಲೇ ಚಾಲನೆ ನೀಡಲಾಗಿದೆ.
ಇದರ ಭಾಗವಾಗಿ ಕೆಸಿಎಫ್ ಸದಸ್ಯರಾಗಿದ್ದು ಕೊಂಡು ಕೊರೋನ ಕಾರಣದಿಂದ ಗಲ್ಫ್ ನಲ್ಲಿ ಉದ್ಯೋಗ ಕಳೆದು ಕೊಂಡಿರುವ ಹಾಗೂ ರಜೆ ನಿಮಿತ್ತವಾಗಿ ಊರಿಗೆ ಬಂದು ಕೋವಿಡ್ ಕಾರಣದಿಂದ ಪುನಃ ಹಿಂದಿರುಗಲಾಗದೆ ಇದೀಗ ಊರಿನಲ್ಲಿ ರುವ ಕೆಸಿಎಫ್ ಒಮಾನ್ ಸದಸ್ಯರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಫುಡ್ ಕಿಟ್ವ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಹಾಗೂ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ಇವರ ನೇತೃತ್ವದಲ್ಲಿ ಚಾಲನೆ ನೀಡಲಾಗಿದ್ದು ಇದೀಗ ಅದನ್ನು ಆಯಾ ಫಾಲಾನುಭವಿ ಕೆಸಿಎಫ್ ಒಮಾನ್ ಸದಸ್ಯರಿಗೆ ಕಿಟ್ಟನ್ನು ತಲುಪಿಸುವ ಹೊಣೆಯನ್ನು ಕೆಸಿಎಫ್ ಒಮಾನ್ ಶಿಕ್ಷಣ ವಿಭಾಗದ ಕಾರ್ಯದರ್ಶಿ , ರಜೆ ನಿಮಿತ್ತವಾಗಿ ಊರಿನಲ್ಲಿರವ ಝುಬೈರ್ ಸ ಅದಿ ಪಾಟ್ರಕ಼ೋಡಿ ವಹಿಸಿ ಕೊಂಡಿದ್ದು ಅದನ್ನು ತಲುಪಿಸುವ ಸೇವೆಯಲ್ಲಿ ನಿರತರಾಗಿರುವ ನಿಮಗೆ ಮತ್ತು ಕೆಸಿಎಫ್ ಮಸ್ಕತ್ ಝೋನ್ ಅಧ್ಯಕ್ಷರಾದ ನವಾಝ್ ಮಣಿಪುರ ಹಾಗೂ ನಿಮ್ಮ ಸಹಪಾಠಿಗಳಿಗೆ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಅಬಾರಿಯಾಗಿದ್ದೇವೆ.ನಿಮ್ಮ ಸೇವೆಯನ್ನು ಅಲ್ಲಾಹನು ಖಬೂಲ್ ಮಾಡಲಿ. ಆಮೀನ್.
✍️ ಮೀಡಿಯಾ ಕೆಸಿಎಫ್ ಒಮಾನ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.