ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್): ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚಿಗೆ ಬಿಇಒ ನೇತೃತ್ವದ ತಂಡವು ಸಾರ್ವಜನಿಕರು ಮೌಖಿಕವಾಗಿ ನೀಡಿದ ದೂರಿನ ಅನ್ವಯ ಶಾಲೆಯಲ್ಲಿನ ಶೈಕ್ಷಣಿಕ ಪ್ರಗತಿ ಮೂಲಭೂತ ಸೌಲಭ್ಯಗಳ ಪರಿಶೀಲಿಸಿದರು .
ಈ ಸಮಯಲ್ಲಿ ಸಾರ್ವಜನಿಕರು ಮಾತನಾಡಿ ಗ್ರಾಮದಲ್ಲಿರುವ ಶತಮಾನ ಶಾಲೆಯಲ್ಲಿ ಗಂಡ- ಹೆಂಡರ ಜಗಳದಲ್ಲಿ ಕೂಸು ಬಡವಾದ್ದಂಗೆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕಿಯ ದಬ್ಬಾಳಿಕೆ ಹಾಗೂ ಮುಖ್ಯಶಿಕ್ಷಕಿ , ಶಿಕ್ಷಕರ ಒಳಜಗಳಕ್ಕೆ ಶೈಕ್ಷಣಿಕವಾಗಿ ಬಡವಾಗುತ್ತಿದ್ದಾರೆ ಅಲ್ಲದ , ಮಾದರಿ ಶಾಲೆಯಾಗಿರುವ ಈ ಶಾಲೆಯು ಮಾದರಿ ಎನ್ನುವ ಪದಕ್ಕೆ ತತ್ವವಿರುದ್ಧವಾಗಿ ಶಾಲೆ ಆವರಣ ಹಾಗೂ ಇತರ ಮೂಲಭೂತ ಸೌಲಭ್ಯಗಳು ಇದೆ.
ಇದರಿಂದಾಗಿ ವಿದ್ಯಾರ್ಥಿಗಳು ಪದಾಡುತ್ತಿದ್ದಾರೆಂದು ವಿದ್ಯಾರ್ಥಿಗಳ ಪೋಷಕರು , ಗ್ರಾಮಸ್ಥರು ಮುಖ್ಯ ಶಿಕ್ಷಕಿಯ ವಿರುದ್ಧ ತಾಲೂಕು ಹಿರಿಯ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು ಶಾಲಾವರಣದಲ್ಲಿ ಶೌಚಾಲಯಗಳು ಇದ್ದರೂ , ಅವುಗಳಿಗೆ ಬೀಗವನ್ನು ಹಾಕಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯ ಹೊರವಲಯದಲ್ಲಿ ಶೌಚಾಲಯಕ್ಕೆ ಹೋಗುವಂತಹ ಪರಿಸ್ಥಿತ ಉಂಟಾಗಿದೆ ಹಾಗೂ ಶಾಲಾ ಕಟ್ಟಡಕ್ಕೆ ಸುಣ್ಣಬಣ್ಣ ಇಲ್ಲ ಸಾರ್ವಜನಿಕರೊಂದಿಗೆ ಉತ್ತಮ ಬಾಂದವ್ಯ ಇಲ್ಲ , ಅಲ್ಲದ ಕಾಟಾಚಾರದ ಎಸ್ಡಿಎಂಸಿ ಸಭೆ ನಡೆಸುತ್ತಾರೆ ಎಂದು ಪೋಷಕರು ದೂರಿದರು .
ಗ್ರಾ.ಪಂ ಅಧ್ಯಕ್ಷೆ ಅರುಣವೆಂಕಟ್ ಮಾತನಾಡಿ ಪೋಷಕರು ಹಾಗೂ ಗ್ರಾಮಸ್ಥರು ಗಾಮದಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶೈಕಣಿಕವಾಗಿ ಪ್ರಗತಿ ಹಾಗೂ ಮೂಲಭೂತ ಸೌಲಭ್ಯ ವಂಚಿತರಾಗಿದ್ದಾರೆಂದು ಗ್ರಾ.ಪಂ.ಅಧ್ಯಕ್ಷರಿಗೆ ಮೌಖಿಕವಾಗಿ ತಿಳಿಸಿದಾಗ , ಶಾಲೆಗೆ ಬೇಟಿ ನೀಡಿ ಶಾಲೆಯ ವಾತವರಣದ ಬಗ್ಗೆ ಬೇಸರ ವ್ಯಕ್ತಡಿಸಿದರು .
ಬಿಇಒ ವಿ.ಉಮಾದೇವಿ ಪೋಷಕರ ಹಾಗೂ ಗ್ರಾ.ಪಂ. ಅಧ್ಯಕ್ಷರ ದೂರಗಳನ್ನು ಆಲಿಸಿ ಮಾತನಾಡಿ ಗಡಿಭಾಗದಲ್ಲಿನ ಸರ್ಕಾರಿ ಶಾಲೆಗಳು ಉಳಿಸಿಕೊಳ್ಳುವುದೇ ಕಷ್ಟಕರವಾಗಿರುವ ಇಂತಹ ಸಮಯದಲ್ಲಿ ಬೇಜವಾರಿ ಕೆಲಸವನ್ನು ನಿರ್ವಹಿಸುವುದು ಸರಿಯಲ್ಲ , ಗ್ರಾ.ಪಂ ಅಧ್ಯಕ್ಷರು , ಸದಸ್ಯರು ಹಾಗೂ ಗ್ರಾಮದ ಮುಖಂಡರು ಹೇಳಿರುವ ಹೇಳಿಕೆಗಳನ್ನು ಒಂದು ವಾರದಲ್ಲಿ ಸರಿಪಡಿಸಿಕೊಳ್ಳವಂತೆ ಎಚ್ಚರಿಸಿದರು .
ಇಲ್ಲವಾದಲ್ಲಿ ಮುಂದಿನ ಕ್ರಮಕೈಕೊಳ್ಳಲಾಗುವುದು ಎಚ್ಚರಿಕೆ ನೀಡಿದರು . ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಸಿ.ವಸಂತ , ಟಿಪಿಒ ನಾರಾಯಣಸ್ವಾಮಿ , ಶಿಕ್ಷಣ ಸಂಯೋಜಕರಾದ ಕೋದಂಡಪ್ಪ , ಬಿಆರ್ಸಿ ಸುಧಾಕರರೆಡ್ಡಿ , ಸಿಆರ್ಪಿ ವರದರೆಡ್ಡಿ , ಗ್ರಾ.ಪಂ . ಸದಸ್ಯರು ಗ್ರಾಮದ ಮುಖಂಡರು ಇದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.