ವಿ.ಕೆ.ನ್ಯೂಸ್ (ಕೋಲಾರ) :ದಿನಾಂಕ 30-01-2022 ರ ಭಾನುವಾರ ನಾನು ತೀವ್ರ ಜ್ವರ, ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಕೋಲಾರ ನಗರದಲ್ಲಿರುವ ಎಸ್.ಎನ್.ಆರ್ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯ ಮಧ್ಯಾಹ್ನ 2:34 ಕ್ಕೆ ಹೊರ ರೋಗಿ ಚೀಟಿ UHID: 20220013817 ಆಗಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡೆ ಈ ವೇಳೆ ನನಗೆ ಚಿಕಿತ್ಸೆ ನೀಡಿದ ವೈದ್ಯರು ಔಷಧಿಗಳ ಚೀಟಿಯನ್ನು ಬರೆದುಕೊಟ್ಟು ಈ ಔಷಧಿಗಳನ್ನು ಶೀಘ್ರವಾಗಿ ತೆಗೆದುಕೊಂಡು ಬನ್ನಿ ಚಿಕಿತ್ಸೆ ನೀಡುತ್ತೇನೆ ಎಂದು ತಿಳಿಸಿದರು.ಆದರೆ ಭಾನುವಾರ ಆದ್ದರಿಂದ ಮಧ್ಯಾಹ್ನದ ವೇಳೆಗೆ ಜಿಲ್ಲಾಸ್ಪತ್ರೆಯ ಔಷಧಾಲಯ ಮುಚ್ಚಲ್ಪಟ್ಟಿತ್ತು. ಆ ಸುತ್ತಮುತ್ತಲಿನ ಔಷಧಾಲಯಗಳು ಸಹ ಮುಚ್ಚಲ್ಪಟ್ಟಿದ್ದವು.
ಆದ್ದರಿಂದ ವೈದ್ಯರ ಸೂಚನೆಯಂತೆ ನಾನು ಕೋಲಾರ ನಗರದ ಎಂ.ಜಿ ರಸ್ತೆಯಲ್ಲಿರುವ ಚಂಪಕ್ ಮೆಡಿಕಲ್ ಶಾಪ್ ನಲ್ಲಿ ವೈದ್ಯರು ಬರೆದುಕೊಟ್ಟಿದ್ದ ಔಷಧಿಗಳನ್ನು ತರಲು ನನ್ನ ಸ್ನೇಹಿತ ಶ್ರೀಕಾಂತ್.ಜೆ ಬಿನ್ ಜಯರಾಮಪ್ಪ ರವರ ದ್ವಿಚಕ್ರ ವಾಹನ ಸಂಖ್ಯೆ KA-07 , ED 5944 ನಲ್ಲಿ ಎಂ.ಜಿ ರಸ್ತೆಯಲ್ಲಿರುವ ಚಂಪಕ್ ಮೆಡಿಕಲ್ ಶಾಪ್ ಗೆ ಬಂದು ಔಷಧಿಗಳನ್ನು ಖರೀದಿಸಲು ಗಾಡಿ ನಿಲ್ಲಿಸಿದಾಗ ಅಲ್ಲೇ ಇದ್ದ ಕೋಲಾರ ನಗರ ಟ್ರಾಫಿಕ್ ಪೋಲೀಸ್ ಶ್ರೀನಿವಾಸ್.ವಿ.ಬಿ (45) ಹೆಚ್.ಸಿ -42 ಎಂಬುವವರು ನಮ್ಮ ಬಳಿಗೆ ಬಂದು ಏಕಾಏಕಿ ಎಂದು ಯಾವುದೇ ಸೂಚನೆ ನೀಡದೆ ಗಾಡಿ ಕೀಲಿ ಕೈ ಕಿತ್ತುಕೊಂಡು ಏಯ್ ಬೋಳಿ ಮಗನೇ ಕಣ್ಣು ಕಾಣಿಸುವುದಿಲ್ಲವೇನೋ ನಿನಗೆ.. ಎಂದು ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಬೈಯ್ದು ನನ್ನಿಂದ ಗಾಡಿ ಕಿತ್ತುಕೊಂಡರು ಸರ್ ನಾನು ಆಸ್ಪತ್ರೆಗೆ ಹೋಗಬೇಕು ಗಾಡಿ ಕೀಲಿ ಕೈ ಕೊಡಿ ಎಂದಾಗ ಒಂದು ಸಾವಿರ ರೂಪಾಯಿ ಹಣ ಕೊಡು ಬಿಡ್ತೀನಿ ಅಂತ ಬೇಡಿಕೆಯಿಟ್ಟರು. ಆಗ ನಾನು ರಸೀದಿ ಕೊಡಿ ಇಲ್ಲವೇ ನೀವು ದಂಡ ವಿಧಿಸಿದರೆ ಕೋರ್ಟ್ ನಲ್ಲಿ ಕಟ್ಟುತ್ತೇನೆ ನೋಟಿಸ್ ಕೊಡಿ ಎಂದು ಕೇಳಿದ್ದಕ್ಕೆ ಕೆರಳಿದ ಟ್ರಾಫಿಕ್ ಪೊಲೀಸ್ ಶ್ರೀನಿವಾಸ್ ವಿ.ಬಿ ರವರು ರಸೀದಿ, ನೋಟೀಸ್ ನನ್ನ ಹತ್ತಿರವಿಲ್ಲ.! ಏಯ್ ನೀನು ಕಾನೂನು ಎಲ್ಲಾ ಮಾತನಾಡೋಕೆ ಬರಬೇಡ.? ಬಾಯಿ ಮುಚ್ಚಿಕೊಂಡು ನಾನು ಕೇಳಿದ್ದು ಹಣ ಕೊಟ್ಟುಬಿಟ್ಟು ಹೋಗು ಎಂದು ಧಮಕಿ ಹಾಕಿದರು.
ಈ ವೇಳೆ ನಾನು ಆಸ್ಪತ್ರೆಗೆ ಹೋಗಿ ಬರುತ್ತಿರುವ ವೈದ್ಯಕೀಯ ದಾಖಲೆ, ವೈದ್ಯರು ಬರೆದುಕೊಟ್ಟಿದ್ದ ಔಷಧಿ ರಸೀದಿ ಪ್ರತಿಗಳನ್ನು ತೋರಿಸಿ ನನಗೆ ಆರೋಗ್ಯ ಸರಿಯಿಲ್ಲ ಈ ಚಂಪಕ್ ಮೆಡಿಕಲ್ ಶಾಪ್ ನಲ್ಲಿ ಔಷಧಿ ಖರೀದಿಸಲು ಬಂದಿದ್ದೇನೆ. ಶೀಘ್ರವಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಆದ್ದರಿಂದ ನಿಮ್ಮ ರೂಲ್ಸ್ ಪ್ರಕಾರ ರಸೀದಿಯ ಮೂಲಕ ದಂಡ ವಿಧಿಸಿ ಬಿಟ್ಟು ಬಿಡಿ ಎಂದು ಬೇಡಿಕೊಂಡರು ಸಹ ಬಿಡಲಿಲ್ಲ.
ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಶ್ರೀನಿವಾಸ್.ಬಿ.ವಿ ರವರು ಕೇಳಿದಷ್ಟು ಹಣವನ್ನು ಅನಾಧಿಕೃತವಾಗಿ ಕೊಡಲಿಲ್ಲವೆಂದು ಹಠಕ್ಕೆ ಬಿದ್ದವರಂತೆ ತಾನೊಬ್ಬ ಸಾರ್ವಜನಿಕ ಅಧಿಕಾರಿಯಾಗಿ ಸರಿಯಾಗಿ ವರ್ತಿಸಬೇಕು ಎಂಬುದನ್ನು ಮರೆತು ಹಣಕ್ಕಾಗಿ ಪೀಡಿಸಿ ನನ್ನ ಅಂಗಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಬೀದಿ ವಸೂಲಿ ಗೂಂಡಾ ರೀತಿ ವರ್ತಿಸಿದರು.
ನನ್ನ ವೈಧ್ಯಕೀಯ ದಾಖಲೆಗಳನ್ನು ತೋರಿಸಿದರು ನನಗೆ ಆಸ್ಪತ್ರೆಗೆ ಹೋಗುವುದಕ್ಕೂ ಬಿಡದೆ ಗಾಡಿಯ ಹಿಂಬದಿಯಲ್ಲಿ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಶ್ರೀನಿವಾಸ್.ವಿ.ಬಿ ಕುಳಿತುಕೊಂಡು ನಾನು ಎಲ್ಲೂ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ನಾನು ಆಸ್ಪತ್ರೆಗೆ ಹೋಗುವುದಕ್ಕೆ ಅಡ್ಡಿಪಡಿಸಿ ನನ್ನ ಸಂಚಾರವನ್ನು ನಿರ್ಬಂಧಿಸಿದರು.
ಈ ವೇಳೆ ನಾನು ಶೀಘ್ರವಾಗಿ ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ಹೋಗಲು ಪರಿಪರಿಯಾಗಿ ಕೇಳಿಕೊಂಡೆ. ಜೊತೆಗೆ ಸರ್ ನಾನೊಬ್ಬ ವಕೀಲ ನನಗೂ ಸಂಚಾರಿ ನಿಯಮಗಳು ಗೊತ್ತಿವೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ನೀವು ರಸೀದಿ ಸಮೇತ ದಂಡ ವಿಧಿಸಿ ಅದು ಬಿಟ್ಟು ಯಾವುದೇ ಸೂಚನೆ ನೀಡದೆ ಏಕಾಏಕಿ ಗಾಡಿ ಕೀಲಿ ಕೈ ಕಿತ್ತುಕೊಂಡು, ಗಾಡಿಯನ್ನು ಠಾಣೆಗೆ ತೆಗೆದುಕೊಂಡು ಹೋಗುವು ಕಾನೂನು ಬಾಹಿರವಾದ ವರ್ತನೆ ಎಂದು ಹೇಳಿ ನನ್ನ ಮೇಲೆ ಈ ಟ್ರಾಫಿಕ್ ಪೊಲೀಸ ಕಾನ್ಸ್ಟೇಬಲ್ ಶ್ರೀನಿವಾಸ್.ವಿ.ಬಿ ರವರು ನಡೆಸಿದ ಹಲ್ಲೆ ದೌರ್ಜನ್ಯವನ್ನು ಸಾರ್ವಜನಿಕವಾಗಿ ಖಂಡಿಸಿ ಚಂಪಕ್ ಮೆಡಿಕಲ್ ಶಾಪ್ ಮುಂದೆಯೇ ಕುಳಿತುಕೊಂಡು ಪ್ರತಿಭಟಿಸಿದೆ.
ಈ ವೇಳೆ ತಡವಾಗಿ ಸ್ಥಳಕ್ಕೆ ಬಂದ ಕೋಲಾರ ನಗರ ಸಂಚಾರಿ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ ರವರಿಗೆ ಈ ಟ್ರಾಫಿಕ್ ಪೊಲೀಸ್ ಶ್ರೀನಿವಾಸ್ ವಿ.ಬಿ ರವರು ಅನಾಧಿಕೃವಾಗಿ ಹಣ ವಸೂಲಿಗೆ ಬೇಡಿಕೆ ಇಟ್ಟಿದ್ದರು ನಾನು ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಬಗ್ಗೆ ವಿವರಿಸಿದೆ ಈ ವೇಳೆ ನಾನೊಬ್ಬ ವಕೀಲ ಸರ್ ನನಗೂ ಈ ಟ್ರಾಫಿಕ್ ನಿಯಮಗಳ ಬಗ್ಗೆ ಗೊತ್ತಿದೆ. ಟ್ರಾಫಿಕ್ ರೂಲ್ಸ್ ಪಾಲಿಸದಿದ್ದರೆ ಕಾನೂನು ರೀತಿ ರಸೀದಿ ಸಮೇತ ದಂಡ ವಿಧಿಸಿ ಅದು ಬಿಟ್ಟು ಈ ರೀತಿ ನಿಮ್ಮ ಟ್ರಾಫಿಕ್ ಪೊಲೀಸರು ರಸೀದಿ ನೀಡಿದೆ ಅನಾಧಿಕೃತವಾಗಿ ಹಣ ವಸೂಲಿಗಾಗಿ ಹಲ್ಲೆ, ದೌರ್ಜನ್ಯ ನಡೆಸಿ ಆರೋಗ್ಯ ಸಮಸ್ಯೆ ಇರುವ ನನ್ನನ್ನು ಆಸ್ಪತ್ರೆಗೆ ಹೋಗುವುದನ್ನು ಅಕ್ರಮವಾಗಿ ತಡೆಯುವುದು. ಯಾವುದೇ ಸೂಚನೆ ನೀಡದೆ ಗಾಡಿ ಕಿತ್ತುಕೊಂಡು ಟೋಯಿಂಗ್ ಮೂಲಕ ಗಾಡಿಯನ್ನು ಠಾಣೆಗೆ ಸಾಗಿಸಲು ಮುಂದಾಗುವುದು ಎಷ್ಟು ಮಾತ್ರ ಸರಿ.? ಸರ್ ಎಂದು ಪುನರುಚ್ಚರಿಸಿದೆ.
ಇದಕ್ಕೆ ಅಣ್ಣಯ್ಯ ರವರು ನೀನು ವಕೀಲನಾದರೆ ಏನು ಕಿತ್ತುಕೊಳ್ಳಲು ಆಗುವುದಿಲ್ಲ. ನಿನ್ನಂತಹ ನನ್ನ ಮಕ್ಕಳನ್ನು ನಾನು ಜಾಸ್ತಿ ಜನರನ್ನು ನೋಡಿದ್ದೀನಿ ಎಂದು ನನ್ನ ವಕೀಲ ವೃತ್ತಿಯನ್ನು ಅಪಮಾನಿಸಿ ನನ್ನನ್ನು ಕೈಗಳಿಂದ ಪಕ್ಕಕ್ಕೆ ತಳ್ಳಿ ಹಲ್ಲೆ ನಡೆಸಿ ಗಾಡಿ ಕಿತ್ತುಕೊಳ್ಳಲು ಮುಂದಾದರು ಈ ವೇಳೆ ಸಾರ್ವಜನಿಕರು ಜಮಾಯಿಸಿ ನನ್ನ ನೆರವಿಗೆ ಬರಲು ಪ್ರಯತ್ನಿಸಿದಾಗ ಈ ಟ್ರಾಫಿಕ್ ಪೋಲಿಸರು ಸಾರ್ವಜನಿಕರಿಗೆ ಧಮಕಿ ಹಾಕಿ ಚದುರಿಸಿದರು ಆಗ ನನಗೆ ಬೇರೆ ವಿಧಿಯಿಲ್ಲದೆ ನಾನು ನನ್ನ ಸ್ನೇಹಿತ ಶ್ರೀಕಾಂತ್ ಗೆ ಈ ಟ್ರಾಫಿಕ್ ಪೋಲೀಸರ ದೌರ್ಜನ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳಲು ಕೋರಿದೆ. ಆಗ ವಿಡಿಯೋ ಮಾಡಲು ಮುಂದಾದ ನನ್ನ ಸ್ನೇಹಿತ ಶ್ರೀಕಾಂತ್ ಮೇಲೆ ಟ್ರಾಫಿಕ್ ಪೊಲೀಸರು ಮುಗಿ ಬಿದ್ದು ವಿಡಿಯೋ ರದ್ದು ಮಾಡು ಇಲ್ಲದಿದ್ದರೆ ನಿಮ್ಮ ಮೇಲೆ ಎಫ್ಐಆರ್ ದಾಖಲಿಸುತ್ತೇನೆ. ಎಂದು ಬೆದರಿಕೆ ಹಾಕಿದರು.
ಇಷ್ಟೆಲ್ಲಾ ಹಲ್ಲೆ , ದೌರ್ಜನ್ಯ ಮಾಡಿ ಮುಗಿದ ನಂತರ ಕೊನೆಯಲ್ಲಿ ಟ್ರಾಫಿಕ್ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ ರವರು ಓನ್ ವೇ ಡ್ರೈವಿಂಗ್, ನೋ ಪಾರ್ಕಿಂಗ್ ಎಂಬ ಕಾರಣವನ್ನು ನೀಡಿ ದಂಡ ವಿಧಿಸಿ ಕೋರ್ಟ್ ನಲ್ಲಿ ಕಟ್ಟುವಂತೆ ಮೂಲಪ್ರತಿ ರಸೀದಿ ಕೈಗಿತ್ತರು.
ಈ ಕೆಲಸವನ್ನು ಮೊದಲೇ ಯಾಕೆ ಟ್ರಾಫಿಕ್ ಪೋಲಿಸರು ಮಾಡಲಿಲ್ಲ. ಅಂದ್ರೆ ಮನಸೋ ಇಚ್ಛೆ ಎಷ್ಟೆಂದರೆ ಅಷ್ಟು ಅನಾಧಿಕೃತವಾಗಿ ಹಣ ವಸೂಲಿ ಮಾಡಿ ಸಾರ್ವಜನಿಕರನ್ನು ಪೀಡಿಸುವ ಈ ವೇಳೆ ಟ್ರಾಫಿಕ್ ಪೋಲೀಸರು ನಾನೊಬ್ಬ ಅನಾರೋಗ್ಯ ಪೀಡಿತ ರೋಗಿ ಎಂಬುದನ್ನು ಪರಿಗಣಿಸದೆ ನನ್ನ ಗಾಡಿ ಹಿಂಬದಿಯಲ್ಲಿ ಕುಳಿತು ಅಮಾನವೀಯವಾಗಿ ನಾನು ಆಸ್ಪತ್ರೆಗೆ ಹೋಗುವುದನ್ನು ನಿರ್ಬಂಧಿಸಿ ನನಗೆ ತೀವ್ರವಾದ ಉಸಿರಾಟದ ಸಮಸ್ಯೆ ಉದ್ಭವಿಸುವಾಗೆ ಮಾಡಿದರು.
ನಾನು ಕಳೆದ 13 ವರ್ಷಗಳಿಂದ ವಿದ್ಯಾರ್ಥಿ ಸಂಘಟನೆಯ ಮುಖಂಡನಾಗಿ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿದ್ದು ಈ ಸಂದರ್ಭಗಳಲ್ಲಿ ಎಂದೂ ನಾನು ಪೋಲಿಸರ ಜೊತೆಗೆ ಅನಾವಶ್ಯಕವಾಗಿ ದುರ್ವರ್ತನೆ ತೋರಿಸಿಲ್ಲ. ಆದರೆ ಪ್ರತಿಭಟನೆಯ ಸಂದರ್ಭಗಳಲ್ಲಿ ಸಣ್ಣ ಪುಟ್ಟ ಮಾತಿನ ಏಕಮುಖಿ ನಡೆಯುವುದು ಸಹಜ ಇದನ್ನೇ ಅವಕಾಶವಾಗಿ ಬಳಸಿಕೊಂಡು ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿ ಎಫ್ಐಆರ್ ದಾಖಲು ಮಾಡಲಾಗಿದೆ.
ಈ ಘಟನೆಯಲ್ಲಿ ಕೋಲಾರ ಟ್ರಾಫಿಕ್ ಪೊಲೀಸರ ಕಾನೂನು ಬಾಹಿರ ವಸೂಲಿ, ದುರ್ವರ್ತನೆಯನ್ನು ಖಂಡಿಸಿ ಪ್ರತಿಭಟಿಸಿದ್ದೇನೆ ಅಷ್ಟೇ ನಾನು ಟ್ರಾಫಿಕ್ ಪೊಲೀಸ್ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ.
ಟ್ರಾಫಿಕ್ ಪೊಲೀಸರೇ ನನ್ನ ಮೇಲೆ ಇಷ್ಟೆಲ್ಲಾ ದೌರ್ಜನ್ಯ ನಡೆಸಿ ಮತ್ತೇ ನಮ್ಮ ಮೇಲೆಯೇ ಸುಳ್ಳು ದೂರು ದಾಖಲಿಸಿ ಎಫ್ಐಆರ್ ಮಾಡಿದ್ದಾರೆ ಈ ಮೂಲಕ ಕಾನೂನು ವ್ಯಾಪ್ತಿಯಲ್ಲಿ ಜನರ ಧ್ವನಿಯಾಗಿರುವ ಹೋರಾಟಗಾರರ ಧ್ವನಿಯನ್ನು ಅಡಗಿಸುವ ತಂತ್ರಕ್ಕೆ ಮುಂದಾಗಿರುವುದು ಸರಿಯಲ್ಲ. ಈ ಸುಳ್ಳು ದೂರಿನ ಎಫ್ಐಆರ್ ರದ್ದುಗೊಳಿಸಬೇಕು. ನನಗೆ ನ್ಯಾಯ ಸಿಗಬೇಕು.
ಪೋಲಿಸರು ಸಂಚಾರಿ ನಿಯಮಗಳನ್ನು ಜಾರಿಗೊಳಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಸಂಚಾರಿ ನಿಯಮಗಳನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕರಿಗೆ ಅಗತ್ಯವಾದ ಅರಿವು, ಜಾಗೃತಿ ಮೂಡಿಸಬೇಕು, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಹಾರ್ದತೆಯುತವಾಗಿ ವರ್ತಿಸಬೇಕು ಮತ್ತು ಅನಾಧಿಕೃತವಾಗಿ ರಸೀದಿ ರಹಿತವಾಗಿ ಹಣ ವಸೂಲಿ, ಸಾರ್ವಜನಿಕರನ್ನು ಶೋಷಣೆ ಮಾಡುವುದು ನಿಲ್ಲಬೇಕು.
ಸರ್ಕಾರ ಇತ್ತಿಚಿಗೆ ಹೊರಡಿಸಿರುವ ಟ್ರಾಫಿಕ್ ಟೋಯಿಂಗ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರೊಂದಿಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸೌಹಾರ್ದಯುತವಾಗಿ ವರ್ತಿಸುವಂತಾಗಬೇಕು.
ನನಗೆ ಕೊವೀಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ನಾನು ನೇರವಾಗಿ ಠಾಣೆಗೆ ಬಂದು ದೂರು ನೀಡಲು ಸಾಧ್ಯವಾಗದೆ ನನ್ನ ತಂಗಿಯ ಕೈಯಲ್ಲಿ ದಿನಾಂಕ 01-02-2022 ರಂದು ಸಂಜೆ 7:23 ರಿಂದ 8:02 ಮಧ್ಯೆ ಕೋಲಾರ ನಗರ ಠಾಣೆಗೆ ದೂರು ದಾಖಲಿಸಲು ಕಳುಹಿಸಲಾಗಿತ್ತು. ಆದರೆ ಠಾಣಾಧಿಕಾರಿಗಳು ನನ್ನ ದೂರು ದಾಖಲಿಸಿಕೊಂಡಿಲ್ಲ.
ಆದ್ದರಿಂದ ಜಿಲ್ಲಾ ಪೋಲೀಸ್ ಅಧೀಕ್ಷಕರವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ನೀಡಿದ್ದೇನೆ.
ಆದ್ದರಿಂದ ನನ್ನ ಮೇಲೆ ಇಷ್ಟೇಲ್ಲಾ ಹಲ್ಲೆ , ದೌರ್ಜನ್ಯ, ನಡೆಸಿದ ಈ ಕೋಲಾರ ನಗರ ಟ್ರಾಫಿಕ್ ಪೊಲೀಸರ ಮೇಲೆ ನನ್ನ ಈ ದೂರನ್ನು ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಕೋಲಾರ ಕೆಲ ಟ್ರಾಫಿಕ್ ಪೊಲೀಸರ ಈ ದೌರ್ಜನ್ಯ, ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬ ಧೋರಣೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ. ಕಾನೂನು ಹೋರಾಟ ನಡೆಸಲಾಗುವುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.