ಬೆಂಗಳೂರು (www.vknews.in) : ಇವತ್ತಲ್ಲ ನಾಳೆ ನಾವು ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ಜವಾಬ್ದಾರಿ ಸಚಿವರ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಪದೇಪದೇ ವಿವಾದ ಸೃಷ್ಟಿಸುತ್ತಿರುವುದು ಅನಾಗರಿಕ ವರ್ತನೆಯಾಗಿದೆ.
ಒಂದು ಸಮುದಾಯಕ್ಕೆ ಟಾರ್ಗೆಟ್ ಮಾಡೋದು ಎಷ್ಟು ಸರಿ? ಯಾರಾದರೂ ಧ್ವಜ ಹಾರಿಸಿದರೆ ಅವರ ಮೇಲೆ ಸರಕಾರ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುತ್ತೆ. ಆದರೆ, ಬಹಿರಂಗವಾಗಿ ಈಶ್ವರಪ್ಪ ಅವರು ಧ್ವಜ ಹಾರಿಸುವುದು ಸಮರ್ಥನೆ ಮಾಡಿಕೊಂಡಿದ್ದಾರಾದರೂ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಇರುವುದು ಸರಕಾರವೂ ಇದಕ್ಕೆ ಪರೋಕ್ಷವಾಗಿ ಸಾಥ್ ನೀಡಿದೆ ಎನ್ನುವುದನ್ನು ಸಾಬೀತು ಪಡಿಸುತ್ತದೆ.
ಸಮಾಜದಲ್ಲಿ ಅಶಾಂತಿಗೆ ಯತ್ನಿಸುತ್ತಿರುವ ಬಿಜೆಪಿ ಸಚಿವರು ಹಾಗೂ ಕಿಡಿಗೇಡಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಎಲ್ಲಾ ನವರು ಸಹೋದರತೆಯಿಂದ ಇರುವಂತಹ ಶಾಂತಿಯುತ ವಾತಾವರಣ ನೆಲೆಗೊಳ್ಳಲು ಸರಕಾರ ಮುಂದಾಗಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷರು ಶ್ರೀಕಾಂತ ಸಾಲಿಯಾನ್ ಆಗ್ರಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.