ನೀವು ಕೋರ್ಟ್ಗೆ ಹೋಗಿದ್ದೀರಿ ಎಂದು ನಾವು ಯಾವುದೇ ಬೇಧಭಾವ ಮಾಡುವುದಿಲ್ಲ..
ನೀವು ಮಿಸ್ ಮಾಡಿಕೊಂಡಿರುವ ನೋಟ್ಸ್ಗಳನ್ನು ಮತ್ತೆ ನಿಮಗೆ ನೀಡಲಾಗುತ್ತದೆ..
ಉಡುಪಿ (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್, ಹೈಕೋರ್ಟ್ ಮೆಟ್ಟಿಲೇರಿದ್ದ ಎಲ್ಲಾ ವಿದ್ಯಾರ್ಥಿನಿಯರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಸಮವಸ್ತ್ರ ಕಡ್ಡಾಯ ಆದೇಶ ಎತ್ತಿಹಿಡಿದ ಹೈಕೋರ್ಟ್ ಶಾಸಕ ರಘುಪತಿ ಭಟ್ ಮಾತನಾಡಿ, ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು ನಾಳೆಯಿಂದ ಎಂದಿನಂತೆ ಕಾಲೇಜಿಗೆ ಬನ್ನಿ. ಮತಾಂಧ ಶಕ್ತಿಗಳ ಮಾತಿಗೆ ನೀವೆಲ್ಲ ಬಲಿಯಾಗಬೇಡಿ. ಹೈಕೋರ್ಟ್ ಆದೇಶ ಪಾಲಿಸಿ ಕಾಲೇಜಿಗೆ ಬನ್ನಿ, ನೀವು ಕೋರ್ಟ್ಗೆ ಹೋಗಿದ್ದೀರಿ ಎಂದು ನಾವು ಯಾವುದೇ ಬೇಧಭಾವ ಮಾಡುವುದಿಲ್ಲ, ಹಿಜಾಬ್ ಗಲಾಟೆಯಿಂದ ನಿಮ್ಮ ಕ್ಲಾಸ್ಗಳು ಹಾಳಾಗಿವೆ. ನೀವು ಮಿಸ್ ಮಾಡಿಕೊಂಡಿರುವ ನೋಟ್ಸ್ಗಳನ್ನು ಮತ್ತೆ ನಿಮಗೆ ನೀಡಲಾಗುತ್ತದೆ. ಹೈಕೋರ್ಟ್ಗೆ ಹೋಗಿ ರಾಜ್ಯದ ತುಂಬಾ ವಿವಾದವಾಗಿದೆ. ಅದನ್ನು ದೇಶಾದ್ಯಂತ ವಿವಾದ ಮಾಡಬೇಡಿ ಎಂದು ಮನವಿ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.