ಕೋಝಿಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪು ತುಂಬಾ ನೋವಿನ ಮತ್ತು ದುರದೃಷ್ಟಕರ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಕಾರಂತೂರು ಮರ್ಕಝ್ ನಲ್ಲಿ ನಡೆದ ಇಮಾಮ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನ್ಯಾಯಾಲಯದ ಬಗ್ಗೆ ಎಲ್ಲಾ ಗೌರವವನ್ನು ಉಳಿಸಿಕೊಂಡು, ಇದು ಮುಸ್ಲಿಂ ಧಾರ್ಮಿಕ ಸಿದ್ಧಾಂತಗಳಿಗೆ ಮತ್ತು ನಾಗರಿಕನಾಗಿ ವಿಶ್ವಾಸಿಯ ಮೂಲಭೂತ ಹಕ್ಕುಗಳಿಗೆ ಹಾನಿ ಮಾಡುತ್ತದೆ. ಹೈಕೋರ್ಟ್ ನಿಂದ ನ್ಯಾಯಯುತ ತೀರ್ಪನ್ನು ನಿರೀಕ್ಷಿಸಿದ್ದೆ, ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯವಲ್ಲ ಎಂದು ನ್ಯಾಯಾಲಯ ಹೇಳಿದ್ದು ಇಸ್ಲಾಮಿಕ್ ವಿರೋಧಿಯಾಗಿದೆ. ಹಿಜಾಬ್ ಕಡ್ಡಾಯವಲ್ಲ ಎಂದು ಮುಸ್ಲಿಂ ಜಗತ್ತಿನಲ್ಲಿ ಎಂದಿಗೂ ಯಾವುದೇ ವಿರೋಧ ಮತ್ತು ವಿವಾದ ನಡೆದಿಲ್ಲ ಎಂದು ಅವರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.