(www.vknews.in) : ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್, ವೈ, ಎಸ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ 2022 ಮಾರ್ಚ್ 14 ಸೋಮವಾರ ಅಪರಾಹ್ನ 2-00ಗಂಟೆಗೆ ಮುಡಿಪು ರಾಯಲ್ ಗಾರ್ಡನ್ನಲ್ಲಿ ಲೀಡರ್ಸ್ ಎಲ್ ತ್ರೀ ಕ್ಲಾಸ್ ಕಾರ್ಯಕ್ರಮ ಜಿಲ್ಲಾಧ್ಯಕ್ಷ ಮುಹಮ್ಮದಲಿ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕರ್ನಾಟಕ ರಾಜ್ಯಾದ್ಯಕ್ಷರಾದ ಝೈನಿ ಉಸ್ತಾದರು ಉದ್ಘಾಟಿಸಿದರು. ಜಿಲ್ಲೆಯ 21 ಸೆಂಟರ್ ಗಳ ಹಾಗೂ ಬ್ರಾಂಚ್ ಗಳಿಂದ ಆಗಮಿಸಿದ ಸುಮಾರು 400 ರಷ್ಟು ಪಿ ಎಸ್ ಟಿ ನೇತಾರರಿಗೆ ಬಹು. ಪೇರೊಡ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಸಂಘಟನೆ ಹಾಗೂ ನೇತೃತ್ವ ಬಗ್ಗೆ ಸವಿಸ್ತಾರ ಕ್ಲಾಸ್ ನಡೆಸಿಕೊಟ್ಟರು.
ಸದರಿ ಕಾರ್ಯಕ್ರಮದಲ್ಲಿ ರಾಯಲ್ ಗಾರ್ಡನ್ನಲ್ಲಿ ಕಾರ್ಯಕ್ರಮಕ್ಕೆ ಸೌಕರ್ಯ ವದಗಿಸಿಕೊಟ್ಟಅದರ ಮಾಲಿಕ ಜನಾಬ್ ಇಬ್ರಾಹಿಂ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸಿ, ದಅವಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.