ಅಧ್ಯಕ್ಷರಾಗಿ ಐ. ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆ
(www.vknews.in) : ಎಲಿಮಲೆ ಅಬ್ದು ರಿಯಾಜ್ ಮಸ್ಜಿದ್ ಬದ್ರಿಯಾ ಜುಮಾಅತ್ ಕಮಿಟಿಯ ಮಹಾಸಭೆ ಎಲಿಮಲೆ ಮದರಸಾ ಸಭಾಂಗಣದಲ್ಲಿ ಮಾರ್ಚ್ 25ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಮಾಅತ್ ಕಮಿಟಿಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ವಹಿಸಿದ್ದರು. ಸ್ಥಳೀಯ ಖತೀಬರಾದ ಮುಹಮ್ಮದ್ ಜೌಹರ್ ಅಹಸನಿ ದುವಾ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಎಂ ಎಚ್ ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಕಳೆದ ಅವಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ ಮಸ್ಜಿದ್ ಮತ್ತು ಮದರಸ ಅಭಿವೃದ್ಧಿಗೆ ತರಿಸಲ್ಪಟ್ಟಿದ್ದ 37 ಲಕ್ಷ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯಿತು. ಪ್ರಶಂಸೆಗಳು ವ್ಯಕ್ತವಾಯಿತು.ಮುಂದಿನ ದಿನಗಳಲ್ಲಿ ಮಸೀದಿ ನವೀಕರಣ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕುರಿತು ಚರ್ಚೆಗಳು ನಡೆದು ಶರೀಹತ್ ಹಾಗೂ ಹಿಫ್ಲ್ ಕಾಲೇಜುಗಳ ನಿರ್ಮಾಣದ ಕಾರ್ಯ ಯೋಜನೆಗಳ ಕುರಿತು ಚರ್ಚೆಗಳು ನಡೆದು ಅಂಗೀಕರಿಸಲಾಯಿತು.
ನಂತರ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಐ ಕೆ ಮಹಮ್ಮದ್ ಇಕ್ಬಾಲ್ ಎಲಿಮಲೆ ರವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಇದರೊಂದಿಗೆ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಪಿ. ಎಚ್. ಯೂಸುಫ್ ಪಾಣಾಜೆ ,ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಎಂ .ಎಚ್.( ಹನೀಪ ಮೆತ್ತಡ್ಕ), ಖಜಾಂಚಿಯಾಗಿ ಮಹಮೂದ್ ವೈ.ಎಂ,ಆಡಳಿತ ಸಮಿತಿ ಸದಸ್ಯರಾಗಿ ಜಿ ಅಬೂಬಕ್ಕರ್ ಸಿದ್ದೀಕ್ ಜೀರ್ಮುಕ್ಕಿ,ಪಿ ಎಚ್ ಅಬೂಬಕ್ಕರ್ ಪಾಣಾಜೆ, ಹಾಜಿ ಜಿ.ಮೂಸ ಕುಂಞಿ ಜೀರ್ಮುಖಿ,ಯು. ಎಂ. ಹೈದರ್ ಹಾಜಿ ಬಟ್ರಬೈಲ್,ವೈ. ಎ .ಬಶೀರ್, ಅಬ್ದುಲ್ ಲತೀಫ್ ಹರ್ಲಡ್ಕ,ಮಹಮ್ಮದ್ ಕುಂಞಿ(ಹನೀಫ್ ಜಿರ್ಮುಕ್ಕಿ) ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮಹಮ್ಮದ್ ಎಂಎಚ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.