ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ): ವಿಮಾ ಪರಿಹಾರ ಚೆಕ್ ಪಡೆದ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸು ಖರೀದಿ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು .
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆ ಯಲ್ಲಿ 42 ಹಾಲು ಉತ್ಪಾದಕರಿಗೆ ರೂ .23.45 ಲಕ್ಷ ಮೌಲ್ಯದ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ , ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಆ ಮೂಲಕ ಹಾಲು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರ ಕಚೇರಿ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ ಹಾಲು ಉತ್ಪಾದಕರು ಹಾಲಿನ ಗುಣಮಟ್ಟ ಹೆಚ್ಚಲು ಹಸುಗಳಿಗೆ ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ , ಖನಿಜ ಮಿಶ್ರಣ , ಗೋಧಾರ ಶಕ್ತಿ ಪುಡಿ ನೀಡಬೇಕು. ಕಾಲು ಬಾಯಿ ಜ್ವರ ಹರಡದಂಗೆ ಎಚ್ಚರ ವಹಿಸಬೇಕು . ಸಾಫ್ ಕಿಟ್ ಬಳಸಬೇಕು ಎಂದು ಹೇಳಿದರು.
ಈಗ ಬೇಸಿಗೆ ಪ್ರಾರಂಭವಾ ಗಿದ್ದು , ಬಿಸಿಲಿ ಝಳ ಹೆಚ್ಚಿದೆ . ಸೀಮೆ ಹಸುಗಳು ಸೂಕ್ಷ್ಮವಾಗಿದ್ದು , ಅವುಗಳನ್ನು ನರಳುಳ್ಳ ಮರಗಳ ಕೆಳಗೆ ಕಟ್ಟಬೇಕು . ಬಿಸಿಲಿನಲ್ಲಿ ಬಿಡುವುದರಿಂದ ಹಲವು ಸಮಸ್ಯೆ ಗಳು ತಲೆದೋರುವ ಸಂಭವ ಇರುತ್ತದೆ . ಹಸು ಆರೋಗ್ಯವಾ ಗಿದ್ದರೆ ಮಾತ್ರ ಗುಣಮಟ್ಟದ ಹಾಲು ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು .
ಉಪ ಕಚೇರಿ ವಿಸ್ತರಣಾದಿ ಕಾರಿ ಎಂ.ಜಿ.ಶ್ರೀನಿವಾಸ್ ಎನ್ . ಶಂಕರ್ , ಪಿ.ಕೆ.ನರಸಿಂಹರಾಜು , ಎಸ್.ವಿನಾಯಕ , ಕೆ.ಪಿ.ಶ್ವೇತ ಇದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.