ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ಸ್ನಾನಕ್ಕೆಂದು ಹೊಳೆಗೆ ಇಳಿದ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಮಚ್ಚಟ್ಟು- ಕಳಿನಜೆಡ್ಡುವಿನಲ್ಲಿ ಸಂಭವಿಸಿದೆ.ಸುಮಂತ್ (18) ಹಾಗೂ ಗಣೇಶ್ (18) ಮೃತ ವಿದ್ಯಾರ್ಥಿಗಳು ಗುರುತಿಸಲಾಗಿದೆ .ಸ್ನಾನಕ್ಕೆಂದು ಇಬ್ಬರು ಗುರುವಾರ ಮಧ್ಯಾಹ್ನದ ವೇಳೆಗೆ ಮಚ್ಚಟ್ಟು ಸಮೀಪದ ನದಿಗೆ ತೆರಳಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ . ಸ್ಥಳೀಯರು ರಕ್ಷಿಸುವಲ್ಲಿ ಪ್ರಯತ್ನ ಪಟ್ಟರಾದರೂ ಅದಾಗಲೇ ಇಬ್ಬರು ಸಾವನೊಪ್ಪಿದ್ದರು . ಉಳ್ಳೂರು-74 ನಿವಾಸಿಗಳಾದ ಈರ್ವರು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ . ಘಟನಾ ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.