(www.vknews.in) : ಹಲಾಲ್ ಎನ್ನುವುದು ಇಸ್ಮಾಂನ ಅವಿಭಾಜ್ಯ ಅಂಗವಾಗಿದೆ, ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಮಾಂಸವನ್ನೆ ಭಕ್ಷನೆ ಮಾಡಬೇಕು ಎನ್ನುವುದು ಜಗತ್ತಿನ ಮುಸಲ್ಮಾನರಿಗೆ ಇರುವ ನಿಯಮವಾಗಿದೆ. ಆದರೆ ಇದು ಯಾವುದೇ ಕಾರಣಕ್ಕೆ ಮುಸ್ಲಿಂಮೇತರರಿಗೆ ಅನ್ವಯವಾಗುವುದಿಲ್ಲ. ಹೀಗಿದ್ದ ಮೇಲೂ ಸತ್ಯವನ್ನು ಮರೆಮಾಚಿ ಇತರ ಧರ್ಮೀಯರಿಗೆ ತಿನ್ನಿಸಿ ಅವರನ್ನು ಧರ್ಮ ಭ್ರಷ್ಟರನ್ನಾಗಿ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಂದೂ ಮುಸಲ್ಮಾನರ ವ್ಯಾಪಾರ ನಿಷೇಧ ಎಂಬುದು ಕಾಲಕಾಲಕ್ಕೆ ನಡೆಯುತ್ತದೆ ಮತ್ತು ಕ್ರಮೇಣ ಸರಿಯಾಗುತ್ತದೆ, ಆದರೆ ಹಲಾಲ್ ಪದ್ದತಿ 1400 ವರ್ಷಗಳ ಹಿಂದೆ ಆರಂಭವಾಗಿದ್ದು, ಪ್ರಳಯದ ತನಕವು ಇದೇ ರೀತಿ ಮುಂದುವರಿಯುವಂತಹ ಕ್ರಮವಾಗಿರುವುದರಿಂದ, ಈ ಸತ್ಯಾಸತ್ಯತೆಯನ್ನು ಮುಸ್ಲಿಮೇತರ ಬಾಂಧವರು ಅರ್ಥ ಮಾಡಿಕೊಂಡು ಅಲ್ಲಾಹನ ಹೆಸರಿನಲ್ಲಿ ಕೊಯ್ಯಲ್ಪಟ್ಟ ಮಾಂಸವು ತಮಗೆ ಒಪ್ಪಿಗೆ ಇಲ್ಲ ಎಂದಾದಲ್ಲಿ ಸ್ವ ಇಚ್ಚೆಯಿಂದ ಇದನ್ನು ವರ್ಜಿಸಿ, ಮುಸ್ಲಿಮೇತರ ವ್ಯಾಪಾರಿಗಳಿಂದ ಖರೀದಿಸಿ ಸೇವಿಸುವುದೇ ಇದಕ್ಕೆ ಇರುವ ಅತ್ಯುತ್ತಮ ಪರಿಹಾರವಾಗಿದೆ. ಹಲಾಲ್ ನಲ್ಲಿ ಇರುವಂತಹ ನಿಬಂಧನೆಗಳು, ಬಳಸುವ ಪದಗಳು ಮತ್ತು ಅದರ ಅರ್ಥಗಳನ್ನು ಮುಸ್ಲಿಮೇತರರಿಗೆ ತಿಳಿಸುವುದು ಮುಸ್ಲಿಂ ಸಮಾಜದ ಕರ್ತವ್ಯವಾಗಿದ್ದು, ಈ ಸತ್ಯಾಸತ್ಯತೆಯನ್ನು ಮರೆಮಾಚಿ ವ್ಯಾಪಾರ ಮಾಡುವುದು ಸರಿಯಾದ ಕ್ರಮವಲ್ಲ ಎಂದು ರಹೀಂ ಉಚ್ಚಿಲ್ ಅಭಿಪ್ರಾಯಪಟ್ಟಿದ್ದು, ಈ ವಿಚಾರದಲ್ಲಿ ಎರಡು ಸಮಾಜದ ಮುಖಂಡರು ಗಂಭೀರವಾದ ಚರ್ಚೆಯನ್ನು ನಡೆಸಿ, ಸೂಕ್ತ ಪರಿಹಾರ ಕಂಡುಕೊಂಡು, ಇದನ್ನು ರಾಜಕೀಯ ಉದ್ದೇಶಕ್ಕೆ ಯಾರು ಬಳಸಿಕೊಳ್ಳಬಾರದು ಎಂದು ಎರಡು ಸಮಾಜದ ಮುಖಂಡರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.