ವಿ.ಕೆ.ನ್ಯೂಸ್ (ಮಾಲೂರು):-ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಕನ್ನಡ ವಿಭಾಗದ ವತಿಯಿಂದ ಯುಗಾದಿ ಕವಿಗೋಷ್ಟಿಯನ್ನು ಸಂಭ್ರಮ ಸಡಗರದಿಂದ ಕಾಲೇಜಿನ ಆವರಣದ ಪ್ರಮುಖ ವೇದಿಕೆಯಲ್ಲಿ ಆಯೋಜಿದಲಾಗಿತ್ತು.
ಯುಗಾದಿ ಕವಿಗೋಷ್ಟಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯೋಜಕರಾದ ಡಾ.ಕೆ.ವಿ.ನೇತ್ರಾವತಿ ರವರು “ಯುಗದ ಮೊದಲ ದಿನ ಯುಗಾದಿಯ ದಿನ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಬೇವು ಬೆಲ್ಲ ತಿಂದು ಸಂಭ್ರಮ ಪಡುವ ಮಹತ್ತರ ಹಬ್ಬ, ಕವಿತೆ ಹುಟ್ಟು, ಸಹಜವಾಗಿ ಕಾವ್ಯ ಮಾಗಬೇಕು. ಕಂಡದ್ದು, ಕೇಳಿದ್ದನ್ನು ರಸವತ್ತಾಗಿ ತೆರೆದಿಡಬೇಕು. ಕಾವ್ಯ ಅಂತರಾಳದ ನೋವಿಗೆ ಕನ್ನಡಿ ಹಿಡಿಯುವಂತಿ ರಬೇಕು. ಹಾವ ಭಾವ, ಅನುಭಾವ ಹೊಂದಿರಬೇಕು” ಎಂದರು.
ಯುಗಾದಿ ಕವಿಗೋಷ್ಟಿಯನ್ನು ಉದ್ಘಾಟನೆ ಮಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ನಿರಂಜನ ವಾನಳ್ಳಿ ರವರು ಮಾತನಾಡುತ್ತಾ “ನಾನು ಒಬ್ಬ ಕವಿಯಾಗಿ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದು ಮರೆಯಲಾರದ ನೆನಪು, “ಹೊಳೆಯ ದಂಡೆಯ ಮೇಲೆ ಮುಖಾ ಮುಖಿ” ಎಂಬ ಕವನಸಂಕಲನವನ್ನು ಬರೆಯುವ ಮೂಲಕ ಹಸ್ತಪ್ರತಿಗೆ ಬಹುಮಾನ ಪಡೆದಿದ್ದು ನನಗೆ ಹೆಮ್ಮೆ ಆ ದಿನದ ಕೆಲವು ನೆನಪುಗಳನ್ನು ಮೆಲುಕು ಹಾಕಿದರು. ಗ್ರಾಮೀಣ ಭಾಗದ ಅನೇಕ ಕವಿಗಳು ಇಂದು ಯುಗಾದಿ ಕವಿಗೋಷ್ಟಿಗೆ ಬಂದಿರುವುದು ನಮಗೆ ಸಂತಸ. ರಾಜ್ಯದಲ್ಲಿ ವಿಶೇಷವಾದ ಛಾಪನ್ನು ಸಾಹಿತ್ಯ ಕ್ಷೇತ್ರದಲ್ಲಿ ಮೂಢಿಸಿ ಸದಾ ಕ್ರೀಯಾಶೀಲವಾಗಿರುವ ಪ್ರೊ.ಟಿ.ಯಲ್ಲಪ್ಪ ರವರ ಕಾವ್ಯ ಕ್ಷೇತ್ರದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ, ಕವಿಗಳಿಗೆ” ತಿಳಿಸಿದರು ಹಾಗೇ ಯುಗಾದಿ ಪುರುಷನೇ ಏಕೆ ಆಗಬೇಕು ಮಹಿಳೆಯೂ ಅಗಬಹುದಲ್ಲವೇ ಎಂಬ ಕಾವ್ಯವನ್ನು” ವಾಚಿಸಿದರು.
ಯುಗಾದಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯದ ಪ್ರಸಿದ್ದ ಕವಿಗಳಾದ ಡಾ.ಟಿ.ಯಲ್ಲಪ್ಪ ರವರು ಮಾತನಾಡಿ “ಕಲೆ ಎಂಬುದು ಸಾಹಿತ್ಯದ ಮೂಲಕ ನಮ್ಮ ಜೀವನದ ಬದ್ದತೆಯನ್ನು ಕಂಡುಕೊಳ್ಳುವ ಕೆಲಸವನ್ನು ಕಾವ್ಯ ಮಾಡುತ್ತದೆ. ಬೇಂದ್ರೆಯವರ ಸಾಲುಗಳು ಸದಾ ನೆನಪು ತರುತ್ತದೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುವುದೇ, ನವಚೈತನ್ಯವನ್ನು ತರುವ ವಿಶೇಷ ಹಬ್ಬವೇ ಯುಗಾದಿ, ಕಾವ್ಯ ವಾಚಿಸಿದ ಎಲ್ಲಾ ಕವಿಗಳ ಕವಿತೆಗಳ ಹಿಮ್ಮಾಹಿತಿ ಒದಗಿಸಿ ಶುಭಹಾರೈಸಿದರು.
ಯುಗಾದಿ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಕೋಲಾರದ ನಾ.ವೆಂಕಿ, ಶೈಲಜಾ,ತ್ರೇಜೋವತಮ್ಮ, ಬಂಗಾರಪೇಟೆಯ ಕಾ.ಹು.ಚಾನ್ ಪಾಷಾ, ಆಸೀಫಾ, ಮಾಲೂರಿನ ದೊಡ್ಡಿ ಪ್ರವೀಣ್, ಡಾ.ನಂಜಪ್ಪ, ಹೊಸಕೋಟೆಯ ಜಯಮಾಲಾ, ಕೆ.ಜಿ.ಎಫ್ ನ ರಾಧ ಕೆ.ಡಾ.ಪ್ರಕಾಶ್, ರವರು ಕವಿತೆ ವಾಚನ ಮಾಡಿದರು.
ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿರ್ದೇಶಕರಾದ ಶ್ರೀಮತಿ ಪ್ರೊ.ಕುಮುದಾ, ಕನ್ನಡ ವಿಭಾಗದ ಪ್ರಾಧ್ಯಪಕಾರದ ಡಾ.ಗಾಯಿತ್ರಿದೇವಿ, ಡಾ.ನಾ.ಮುನಿರಾಜ್, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಂಯೋಜಕರಾದ ಡಾ.ಮಂಜುನಾಥ್, ಶ್ರೀಮತಿ ಸಂಪ್ರತಿ, ವಿವಿಧ ವಿಭಾಗಗಳ ಸಂಯೋಜಕರು, ಪ್ರಾಧ್ಯಾಪಕರು, ಹಾಗೂ ಕನ್ನಡ ವಿಭಾಗದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.