ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ) : ತಾಲೂಕಿನ ಪುರಾಣ ಪ್ರಸಿದ್ದ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮನ್ಮಹಾ ರಥೋತ್ಸವ ಗುರುವಾರ ಸಂಪನ್ನ ಗೊಂಡಿತು.ದೇವಳದ ಆಡಳಿತ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ,ಜೊತೆ ಆಡಳಿತ ಧರ್ಮದರ್ಶಿಗಳಾದ ಆಜ್ರಿ ಚಂದ್ರಶೇಖರ್ ಶೆಟ್ಟಿ ,ಅರ್ಚಕ ವ್ರನ್ದ ಸೇರಿದಂತೆ ಊರ ,ಪರ ಊರ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು .ಕುಂದಾಪುರ ದಿಂದ 35 ಕೀ.ಮೀ .ಪೂರ್ವ ದಿಕ್ಕಿಗೆ ,ಸಿದ್ದಾಪುರದಿಂದ 7 ಕೀ .ಮೀ .ದೂರವಿರುವ ಶ್ರೀ ಕ್ಷೇತ್ರ ಕಮಲಶಿಲೆ ಹಚ್ಚ -ಹಸುರಿನ ಪಚ್ಚಿಮ ಘಟ್ಟದ ತಪ್ಪಲಿನ ಮಧ್ಯೆ, ಪ್ರಶಾಂತವಾಗಿ ವರ್ಷವಿಡೀ ಹರಿಯುವ ಕುಬ್ಜಾ ನದಿ ತೀರದಲ್ಲಿನೆಲೆ ನಿಂತಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿಯ ಇತಿಹಾಸ ಅಪಾರ .”ಕ್ರರಾಕ್ಷ ” ರಾಕ್ಷಸನ್ನು ವಧಿಸಿ ಬ್ರಾಹ್ಮೀ ಎಂಬ ನಾಮಕಿಂತ ಗೊಂಡು, ಶ್ರೀ ದೇವಿ ಅಪಾರ ವತಾರದಿ0ದ ಭಕ್ತರ ಇಷ್ಟಾರ್ಥಾಕ್ಕ ನುಗುಣವಾಗಿ ಬ್ರಾಹ್ಮಿ ದುರ್ಗಾ ಪರಮೇಶ್ವರಿಯಾಗಿ ರೂಪು ಗೊಂಡಿತು . ಶ್ರೀ ದೇವಿಯ ಉದ್ಭವ ಲಿಂಗ (ಮೂರ್ತಿ )ಯು ಕಮಲದ ಶಿಲೆ (ಕಲ್ಲು ) ರೀತಿಯನ್ನು ಹೊಂದಿರುದರಿಂದ ಈ ಪ್ರಾಂತ್ಯವನ್ನು ಕಮಲಶಿಲೆ ಎಂದು ಕರೆಯಲ್ಪಡುತ್ತಿದೆ .ಈ ಸ್ಥಳವು ಹಿಂದೆ ಮಹಾ ತಪಸ್ವಿ ಗಳಾದ “ರೈಕ್ವ” ಮುನಿಗಳ ಆಶ್ರಮವಾಗಿತ್ತು.”ಗೌರಿ ಶಕ್ತಿ” ಇಂದ ಕೂಡಿದ ಶ್ರೀ ದುರ್ಗೆಯು ಪ್ರಚಂಡ ರಾಕ್ಷಸರುಗಳಾದ “ಖಾರಸುರ “.ರಟ್ಟಸುರ’ ರನ್ನು ಸಂಹಾರ ಮಾಡಿ ಶಿವನಾಜ್ಞೆಯಂತೆ ಇಲ್ಲಿಯೇ ನೆಲೆ ನಿಂತಳು ಎನ್ನವುದು ಸ್ಕಂದ ಪುರಾಣದ ಉಲ್ಲೇಖವಾಗಿದೆ . ಪ್ರತಿ ದಿನ ಇಲ್ಲಿ ಉಷಾ:ಕಾಲ,ಪ್ರಾತ:ಕಾಲ ,ಮಧ್ಯಾಹ್ನ ,ಸಂದ್ಯಾಕಾಲ ,ರಾತ್ರಿ ,ಹೀಗೆ ಐದು ಪೂಜೆಗಳು ,ತ್ರಿಕಾಲ ಪೂಜೆಗಳು ನಡೆಯತ್ತದೆ .ಶ್ರೀ ಚಂಡಿಕಾಯಾಗ ,ಬೆಳ್ಳಿ ರಥೋತ್ಸವ,ರಾತ್ರಿ ಮಹಾರಂಗ ಪೂಜೆ ,ಸರ್ವಭಾರಣ ಉತ್ಸವ ,ಪುಷ್ವ ರಥೋತ್ಸವ ನಡೆಯತ್ತದೆ .ಶ್ರೀ ಕ್ಷೇತ್ರದ ವತಿ ಯಿಂದ ಯಕ್ಷಗಾನ ನಡೆಯುತ್ತಿದ್ದೂ .ಬೆಳಕಿನ ಸೇವೆ ಹರಕೆ ಹೊತ್ತ ಭಕ್ತಾಧಿಗಳು ತಮ್ಮ ಮನೆಗಳಲಿ ನೆರವೇರಿಸುತ್ತಾರೆ .ಭಕ್ತಾಧಿಗಳು ತಮ್ಮ ಮಾನಸಿಕ ,ದೈಹಿಕ, ವಯಕ್ತಿಕ ತೊಂದರೆ ಗಳಿ0ದ ಪಾರಾಗಲು ಶ್ರೀ ಕ್ಷೆತ್ರವನ್ನು ಅವಲಂಬಿಸುವುದರ ಜೊತೆಗೆ,ಜಾನುವಾರುಗಳಿಗೆ ರೋಗ -ರುಜಿನಿಗಳು ಬಂದಾಗ ಹರಕೆ ರೂಪದಲ್ಲಿ ಗೋವು ಗಳನ್ನೂ ಶ್ರೀ ದೇವಿಯ ಭಂಡಾರಕ್ಕೆ ಬಿಡುತ್ತಾರೆ ,ಇನ್ನು ಬಹಳಷ್ಟು ಹರಕೆ ರೂಪದ ಜಾನುವಾರುಗಳು ಭಕ್ತಾಧಿಗಳ ಮನೆಯಲ್ಲಿದ್ದೂ ,ಕಾಲ- ಪೂಜಕ್ಕೆ ತಕ್ಕಂತೆ ಹಾಲು -ತುಪ್ಪವನ್ನು ತಂದೊಪ್ಪಿಸುತ್ತಾರೆ. ಸೀರೆ ,ಆಭರಣಗಳನ್ನೂ ತಂದೊಪ್ಪಿಸಿ ಶ್ರೀ ದೇವಿಯ ಕ್ರಪೆಗೆ ಪಾತ್ರರಾಗುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.