ತರವೀಹ್ ನಮಾಜ್ ಮುಗಿಸಿ ರಸ್ತೆ ದಾಟುತ್ತಿದ್ದಾಗ ಅಪಘಾತ..
ಜಿಝಾನ್ (ವಿಶ್ವ ಕನ್ನಡಿಗ ನ್ಯೂಸ್) : ಸೌದಿ ಅರೇಬಿಯಾದ ಜಿಝಾನ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಕಣ್ಣೂರು ಮೂಲದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಮೃತರನ್ನು ಕಪ್ಪದ್ ನಿವಾಸಿ ಒ.ಕೆ.ಅಬ್ದುಲ್ ರಶೀದ್ (47) ಎಂದು ಗುರುತಿಸಲಾಗಿದೆ.
ಜಿಝಾನ್ ನಿಂದ 100 ಕಿ.ಮೀ ದೂರದಲ್ಲಿರುವ ದರ್ಬಿಲ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ತರವೀಹ್ ನಮಾಜಿನ ನಂತರ ಆ ವ್ಯಕ್ತಿ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿದಿಬಂದಿದೆ. ದರ್ಬ್ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ದೇಹವನ್ನು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಸಮಾಧಿ ಮಾಡಲಾಗುತ್ತದೆ.
ಮೃತರು ತಂದೆ ಮುಹಮ್ಮದ್, ತಾಯಿ ನಬೀಸಾ, ಪತ್ನಿ ಸಜೀರಾ, ಮಕ್ಕಳು ಅತಿ, ಐನ್ ಅನಾಬಿಯಾ, ಹಮೀ ಅಲಿಯಾ ರನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.