ದುಬೈ ಈದ್ ಮೀಟ್ ಟ್ರೋಫಿ ನೆಲ್ಲಿಹುದಿಕೇರಿ ಮತ್ತು ಚೆರಿಯಪರಂಬು ಮಡಿಲಿಗೆ..
ಅಬುಧಾಬಿ (www.vknews.in) : ಕೊಡಗು ಜನತೆ ಹಿಂದಿನ ಕಾಲದಿಂದಲೂ ಆಟೋಟ ಮತ್ತು ಸೇನೆಯಲ್ಲಿ ವಿಶೇಷ ಕಾಳಜಿ ಉಳ್ಳವರು, ಇಂದಿನ ತಲೆಮಾರು ಸಹ ಅದನ್ನೇ ಅನುಸರಿಸಿ ಹೋಗುತ್ತಿದ್ದು ದೂರದ ಅರಬರ ಮರಳುಗಾಡಿನಲ್ಲಿಯೂ ಕ್ರೀಡಾ ಸ್ಪೂರ್ತಿ ಹೊಂದಿರುದು ವಿಶೇಷ.
ಕ್ರಿಕೆಟ್ ವಿವರ : ಪವಿತ್ರ ರಂಜಾನ್ ತಿಂಗಳು ಕಳೆದು ಈದ್ ಹಬ್ಬ ಆಚರಣೆ ವೇಳೆ ದುಬೈಯಲ್ಲಿರುವ ಸರ್ವ ಕೊಡಗಿನವರನ್ನು ಪರಸ್ಪರ ಭೇಟಿಯಾಗಲು ಅವಕಾಶ ಸಿಗುವ ವೇದಿಕೆಯಾಗಿದೆ ಈದ್ ಮೀಟ್ ಕ್ರೀಡೆಗಳಾದ ಕೊಡಗಿನವರ ಕ್ರಿಕೆಟ್ ವಾಲಿಬಾಲ್ ಮತ್ತು ಫುಟ್ಬಾಲ್, ಎಲ್ಲಾ ವರ್ಷಗಳ ರೀತಿ ಈ ವರ್ಷವು ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ದುಬೈ ಆಯೋಜಿಸಿದ ಕ್ರಿಕೆಟ್ ಪಂದ್ಯಾಕೂಟದಲ್ಲಿ ನಿಶಾಬ್ ನಾಯಕತ್ವದ ಕೂರ್ಗ್ ವಾರಿಯರ್ಸ್ ನೆಲ್ಲಿಹುದಿಕೇರಿ ತಂಡ ಹಿರಿಯ ಕ್ರೀಡಾಪಟು ದುಡ್ಡಿಯಂಡ ಝಿಯಾ ನಾಯಕತ್ವದ ಚೋಕಂಡಳ್ಳಿ ತಂಡವನ್ನು ಮಣಿಸಿ ವಿಜಯ ಶಾಲಿಯಾಗಿ 2022ನೇ ಸಾಲಿನ ಪ್ರತಿಷ್ಠಿತ ಈದ್ ಮೀಟ್ ಕ್ರಿಕೆಟ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು, ಕ್ರಿಕೆಟ್ ಟೂರ್ನಮೆಂಟಿನಲ್ಲಿ ಎಡಪಲ, ಕುಂಜಿಲ, ಗುಂಡಿಕೆರೆ, ಕೊಂಡಂಗೇರಿ, ನಾಲ್ಕುನಾಡು, ಚಾಮಿಯಾಲ, ಮಾಪಿಳತೋಡು, ನೆಲ್ಲಿಹುದಿಕೇರಿ ಮತ್ತು ಚೋಕಂಡಲ್ಲಿ ಸೇರಿ 10 ತಂಡಗಳು ಟ್ರೋಫಿಗಾಗಿ ಸೆಣಸಾಡಿದರು.
ಕ್ರಿಕೆಟ್ ಟೂರ್ನಮೆಂಟಲ್ಲಿ ಉತ್ತಮ ಬ್ಯಾಟ್ಸಮನ್ ಆಗಿ ನೆಲ್ಲಿಹುದಿಕೇರಿ ತಂಡದ ನೌಶೀರ್ ಎಡಪಲ ಮತ್ತು ಉತ್ತಮ ಬಾಲರ್ ಆಗಿ ಚೋಕಂಡಳ್ಳಿ ತಂಡದ ಕಪ್ತಾನ ಝಿಯಾ ಅವರು ಪ್ರಶಸ್ತಿ ಪಡೆದುಕೊಂಡರು, ಕ್ರಿಕೆಟ್ ಪಂದ್ಯಾವಳಿಗಳನ್ನು ರಫೀಕಲಿ ಕುಂಡಂಡ ಕುಂಜಿಲ, ಖಲೀಲ್ ಚಾಮೇ ಮತ್ತು ಶಮೀರ್ ಹೊಳಮಾಳ ಅವರು ಅಚ್ಚುಕಟ್ಟಾಗಿ ಆಯೋಜಿಸಿದರು. ಪಂದ್ಯಕೂಟದ ಬೆಂಬಲಿಗ ಪ್ರಾಯೋಜಕರಾದ ಅಬ್ದುಲ್ಲಾ ಕೊಂಡಂಗೇರಿ ಮಾಲಿಕತ್ವದ ಹೊದವಾಡ ರಾಫೆಲ್ ಶಾಲಾ ಕಾಲೇಜು, ಜಿಮಾಕ್ ಟೈಪಿಂಗ್ ಸಂಸ್ಥೆಯ ಮಾಲಿಕರಾದ ಗಫೂರ್ ಎಮ್ಮೆಮಾಡು ಮತ್ತು ಅಶ್ರಫ್ ಎಮ್ಮೆಮಾಡು ಮಾಲಿಕತ್ವದ ಈ ಸಿ ಕಾರ್ಗೋ ಸಂಸ್ಥೆಯ ಉದ್ಯೋಗಿ ಟ್ರೋಫಿಯನ್ನು ಆಯೋಜಕರಿಗೆ ಹಸ್ತಾಂತರಿಸಿ ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರ ಗೀತೆ, ಭಾರತ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡ ಗೀತೆ ಹಾಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.
ಫುಟ್ಬಾಲ್ ವಿವರ : ಎಲ್ಲಾ ವರ್ಷಗಳ ಹಾಗೆ ಈ ವರ್ಷವು ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ದುಬೈ ಆಯೋಜಿಸಿದ ಕಾಲ್ಚೆಂಡು ಪಂದ್ಯಾಕೂಟದಲ್ಲಿ ಅಸಿಫ್ ಪರವಂಡ ನಾಯಕತ್ವದ ಏವೆಂಜರ್ಸ್ ಚೆರಿಯಪರಂಬು ತಂಡ ಅಶ್ರಫ್ ಕುಂಡಂಡ ನಾಯಕತ್ವದ ಬಲಿಷ್ಠ ಕುಂಜಿಲ ತಂಡವನ್ನು ಪೆನಾಲ್ಟಿ ಶೂಟ್ ಔಟಿನಲ್ಲಿ ಮಣಿಸಿ 2022ನೇ ಸಾಲಿನ ಪ್ರತಿಷ್ಠಿತ ಈದ್ ಮೀಟ್ ಫುಟ್ಬಾಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು, ಪಂದ್ಯಾಕೂಟದಲ್ಲಿ ಉತ್ತಮ ಆಟಗಾರನಾಗಿ ಕುಂಜಿಲ ತಂಡದ ನಿಜಾಮ್ ಅವರು ಪ್ರಶಸ್ತಿ ತಮ್ಮದಾಗಿಸಿದರೆ ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಚೆರಿಯಪರಂಬು ತಂಡದ ನಜ್ಜಿ ಅವರು ಪಡೆದುಕೊಂಡರು,
ಪಂದ್ಯಕೂಟದ ಬೆಂಬಲಿಗ ಪ್ರಾಯೋಜಕರಾದ ಈ ಸಿ ಕಾರ್ಗೋ ಸಂಸ್ಥೆಯ ಮಾಲಿಕರಾದ ಅಶ್ರಫ್ ಎಮ್ಮೆಮಾಡು ಅವರು ಟ್ರೋಫಿಯನ್ನು ಆಯೋಜಕ ರಫೀಕಲಿ ಕುಂಡಂಡ ಕುಂಜಿಲ ಅವರಿಗೆ ಹಸ್ತಾಂತರಿಸಿ ಭಾರತ ರಾಷ್ಟ್ರ ಗೀತೆ ಹಾಡುವ ಮೂಲಕ ಪಂದ್ಯಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು, ಫುಟ್ಬಾಲ್ ಚಾಂಪಿಯನ್ ಪಟ್ಟಕ್ಕಾಗಿ ಕೊಡಗಿನ ಏಳು ತಂಡಗಳಾದ ಚಾಮಿಯಲ, ಎಮ್ಮೆಮಾಡು, ಕೊಂಡಂಗೇರಿ ಕುಂಜಿಲ ಮತ್ತು ಚೆರಿಯಪರಂಬು ತಂಡಗಳು ಸೆಣಸಾಡಿದರು.
ಕ್ರಿಕೆಟ್ ಪಂದ್ಯಾವಳಿಗಳು ದಿನಾಂಕ ಮೇ 2ರಂದು ಜಧಾಫಿನ ಕ್ರೀಕ್ ಜಿ ಫೋರ್ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆಯಿತು ಮತ್ತು ಫುಟ್ಬಾಲ್ ಪಂದ್ಯಾವಳಿಗಳು ಮೇ 7ರಂದು ಅಬು ಹೈಲ್ ನಲ್ಲಿರುವ ಸ್ಕೌಟ್ ಮಿಶನ್ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆಯಿತು.
ವರದಿ : ರಫೀಕಲಿ ಕುಂಡಂಡ ಕುಂಜಿಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.