ಅಬ್ದುಲ್ ರಹೀಮ್ ಪಟೇಲ್ಅಧ್ಯಕ್ಷರು SDTU ಕರ್ನಾಟಕ
ಬೆಂಗಳೂರು (www.vknews.in) : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ರವಿ ಎಂಬವರು ಮೃತಪಟ್ಟಿದ್ದಾರೆ ದಿವಾನ್ ಕಾಫಿ ಎಸ್ಟೇಟ್ ನಲ್ಲಿ ಯಂತ್ರದ ಮೂಲಕ ಗುಂಡಿ ತೋಡುವ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ.
ಈ ಭಾಗದಲ್ಲಿ ಕಾಡಾನೆ ದಾಳಿಗೆ ಹಲವು ಕಾರ್ಮಿಕರು, ಸ್ಥಳೀಯರು ಈಗಾಗಲೇ ಬಲಿಯಾಗಿದ್ದು ಸರ್ಕಾರ ಎಚ್ಚೆತ್ತು ಇಲ್ಲಿನ ನಾಗರಿಕರನ್ನು ಕಾಡಾನೆ ದಾಳಿಯಿಂದ ರಕ್ಷಣೆಗೆ ವಿಶೇಷ ಕ್ರಮ ವಹಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಸರ್ಕಾರವನ್ನು ಆಗ್ರಹಿಸುತ್ತದೆ
ಆನೆಗಳ ದಾಳಿಯಿಂದ ಈ ಭಾಗದ ಜನರು ನಿರಂತರವಾಗಿ ಜೀವ ಮತ್ತು ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ ಪದೇ ಪದೇ ಕಾಡಾನೆ ದಾಳಿಯ ಭೀತಿಯಿಂದ ಇಲ್ಲಿನ ಜನಸಾಮಾನ್ಯರು ತೋಟದಲ್ಲಾಗಲಿ ರಸ್ತೆಯಲ್ಲಾಗಲಿ ಮುಕ್ತವಾಗಿ ಓಡಾಡುವಂತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಇಲ್ಲಿನ ಜನರ ಪ್ರಾಣ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಹಾಗೂ ಮೃತ ಕಾರ್ಮಿಕನ ಕುಟುಂಬಕ್ಕೆ ಎರಡು ಎಕ್ರೆ ಜಮೀನು, ಸರ್ಕಾರಿ ಉದ್ಯೋಗ 50ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಸರ್ಕಾರವನ್ನು ಆಗ್ರಹಿಸುತ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಖಾದರ್ ಫರಂಗಿಪೇಟೆ ಮಾಧ್ಯಮ ಸಂಯೋಜಕರು SDTU ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.