ಉಡುಪಿ:( ವಿಶ್ವ ಕನ್ನಡಿಗ ನ್ಯೂಸ್ ) :ಸಮಾನಮನಸ್ಕ ಸಂಘಟನೆಗಳಿಂದ ಸೌಹಾರ್ದ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶ ಜಾತಾ ನಡೆಯಿತು.ಶನಿವಾರ ಉಡುಪಿಯ ಹುತಾತ್ಮ ವೇದಿಕೆಯಲ್ಲಿ ಮಧ್ಯಾಹ್ನ ಆರಂಭವಾದ ಕಾರ್ಯಕ್ರಮ ರಾತ್ರಿ 9 ಗಂಟೆಯವರೆಗೆ ನಡೆಯಿತು .ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸಾಮರಸ್ಯ ನಡಿಗೆಗೆ ವಿವಿಧ ರಾಜ್ಯ ಸಂಘಟನೆಗಳ ನಾಯಕರು ಏಳು ಬಣ್ಣಗಳ ಧ್ವಜವನ್ನು ಹಾರಿಸುವ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡುವರು, ಬಳಿಕ ಜೋಡುಕಟ್ಟೆ ಮೂಲಕ ಕೋರ್ಟ್ ರಸ್ತೆ, ಡಯಾನಾ ವೃತ್ತ, ತ್ರಿವೇಣಿ ವೃತ್ತ, ಕ್ಲಾಕ್ ಟವರ್, ಕಿದಿಯೂರು ಹೋಟೆಲ್, ಸಿಟಿ ಬಸ್ ನಿಲ್ದಾಣ ರಸ್ತೆ, ಸರ್ವಿಸ್ ಬಸ್ ನಿಲ್ದಾಣ ಮೂಲಕ ಸಾಗಿ ಕ್ಲಾಕ್ ಟವರ್, ತ್ರಿವೇಣಿ ವೃತ್ತ, ಡಯಾನಾ ವೃತ್ತ, ಹಳೆ ತಾಲೂಕು ಕಚೇರಿ ವೃತ್ತ, ಮಿಷನ್ ಆಸ್ಪತ್ರೆ ರಸ್ತೆ ಮಾರ್ಗವಾಗಿ ಕ್ರಿಶ್ಚಿಯನ್ ಪ.ಪೂ. ಕಾಲೇಜು ಮೈದಾನದಲ್ಲಿ ಈ ಸಾಮರಸ್ಯ ನಡಿಗೆ ಸಮಾಪ್ತಿಗೊಂಡಿತು. ನಾಡಿನ ಬೇರೆ ಬೇರೆ ಧಾರ್ಮಿಕ ಮುಖಂಡರು ಸಾಮಾಜಿಕ ಚಿಂತಕರು, ಪ್ರಗತಿಪರರು, ರಾಜಕೀಯ ಮುಖಂಡರುಗಳು ಸಮಾವೇಶದಲ್ಲಿ ಭಾಗಿಯಾದರು. ಹಿಂದೂ ಕ್ರೈಸ್ತ ಮುಸಲ್ಮಾನ ಸಿಖ್ ಧರ್ಮಗುರುಗಳು ಈ ಸಮಾವೇಶದಲ್ಲಿ ಹಿತವಚನ ನೀಡಿದರು. ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಸೌಹಾರ್ದ ಗೀತೆಗಳನ್ನು ಹಾಡಿದರು. ಸಮಾವೇಶದಲ್ಲಿ ಅನೇಕ ಪುಸ್ತಕಗಳು ಬಿಡುಗಡೆಯಾದವು. ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.