ಕಯ್ಯಾರ ಕಿಂಞಣ್ಣ ರೈ ಯವರ ಒಡನಾಡಿ ಪ್ರಗತಿಪರ ಉದ್ಯಮಿ ಸಮಾಜ ಸೇವಕ ಬದಿಯಡ್ಕ ಮೂಸಾ ಹಾಜಿಯವರಿಗೆ “ಪ್ಲಾಟಿನಂ ಜುಬಿಲಿ” ಸನ್ಮಾನ
(www.vknews.in) : ಕಾಸರಗೋಡು ತಾಲೂಕಿನ ಬದಿಯಡ್ಕ ನಿವಾಸಿ ಪ್ರಗತಿಪರ ಕೃಷಿಕ, ಉದ್ಯಮಿ ಮೂಸಾ ಹಾಜಿಯವರಿಗೆ ಕುಟುಂಬಸ್ಥರು ಮತ್ತು ಹಿತೈಷಿಗಳು ೭೫ನೇ ವರ್ಷದ “ ಪ್ಲಾಟಿನಂ ಜುಬಿಲಿ” ಅಂಗವಾಗಿ ಸನ್ಮಾನಿಸಲಾಯಿತು.
ಕವಿ ನಾಡೋಜ ದಿ. ಡಾ. ಕಯ್ಯಾರ ಕಿಂಞಣ್ಣ ರೈಯವರ ದಶಕಗಳ ಒಡನಾಡಿಯಾಗಿದ್ದು, ರೈ ಕುಟೀರದ ನೆರೆಯವರಾದ ಮೂಸಾ ಹಾಜಿಯವರು ಕರ್ನಾಟಕದ ಸಕಲೇಶಪುರ, ಮಡಿಕೇರಿ, ಸುಳ್ಯದಲ್ಲಿ ಟಿಂಬರ್ ವ್ಯಾಪಾರವನ್ನುಮಾಡಿಕೊಂಡು ಬರುತ್ತಾ ನಿವೃತ್ತ ಜೀವನದಲ್ಲಿ ಕೃಷಿಯನ್ನು ಕಾಯಕಮಾಡಿಕೊಂಡು ಸಮಾಜ ಸೇವೆಗೈಯುತ್ತಾ ಜೀವನದ “ಅಮೃತ ಕ್ಷಣ”ವನ್ನು ಅನುಭವಿಸಿದವರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಸದಸ್ಯ ಕೆ.ಯಂ. ಮುಸ್ತಫ ..ಅಬ್ದುಲ್ ಹಮೀದ್ ಜನತಾ, ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್, ಜನತಾ ಗ್ರೂಫ್ಸ್ನ ಉದ್ಯನಿ ರಿಜ್ವಾನ್ ಜನತಾ , ಉದ್ಯಮಿ ಕೆ.ಬಿ.ಇಬ್ರಾಹಿಂ, ಹಾಜಿ ಕೆ.ಎ ಉಮ್ಮರ್ ಕಟ್ಟೆಕ್ಕಾರ್ಸ್, ಮೂಸಾ ಹಾಜಿಯವರ ಕುಟುಂಬಸ್ಥರಾದ ಇಕ್ಫಾಲ್, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.