ಚಿಕ್ಕಮಗಳೂರು (www.vknews.in) : ಚಿಕ್ಕಮಗಳೂರು ನಗರದ ತಮೀಳು ಕಾಲೋನಿ ವಾರ್ಡ್ ನಂ 22 – 23 ರಲ್ಲಿ ಕಲುಷಿತಗೊಂಡ ನೀರು ಕುಡಿದು ಅಸ್ವಸ್ಥಗೊಂಡ 80 ಕ್ಕು ಹೆಚ್ಚು ಜನ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪ್ರದೇಶದಲ್ಲಿ ಯುಜಿಡಿ ನೀರು ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಒಟ್ಟಿಗೆ ಇದ್ದು ಬಹಳ ತಗ್ಗು ಪ್ರದೇಶ ಇರುವುದರಿಂದ ಕುಡಿಯುವ ನೀರಿನ ಪೈಪ್ ಗೆ ಯು ಜಿ ಡಿ ಕಲುಷಿತಗೊಂಡ ನೀರು ಕುಡಿಯುವ ನೀರಿಗೆ ಮಿಶ್ರಣ ವಾಗಿ ಅದರಲ್ಲಿ ಸಣ್ಣ ಸಣ್ಣದ ಹುಳಗಳು ಸಹ ಕಂಡುಬಂದಿದ್ದವು.
ಇದೇ ವಿಷಯಕ್ಕೆ ಸಂಭಂದಿಸಿದಂತೆ ಎರಡು ತಿಂಗಳ ಹಿಂದೆ ನಗರ ಸಭೆ ಸದಸ್ಯರಿಗೆ ಮತ್ತು ಕಮೀಷನರ್ ರವರಿಗೆ ಎಸ್ಡಿಪಿಐ ದೂರು ನೀಡಿದ್ದು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಈ ಅನಾಹುತ ಸಂಭವಿಸಿದೆ. ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣವೆಂದು ಎಸ್ಡಿಪಿಐ ಅರೋಪಿಸುತ್ತಿದೆ.
ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಯವರು ಎಲ್ಲಾ ವಿಚಾರದಲ್ಲೂ ಹಿಂದೂ ಮುಸ್ಲಿಂ ನಡುವೆ ಕೋಮುವಾದದ ಬಣ್ಣ ನೀಡಿ ಇಡೀ ಕರ್ನಾಟಕ್ಕೆ ಬೆಂಕಿ ಇಡವುದರಲ್ಲಿ ತಲ್ಲೀಣರಾಗಿದ್ದಾರೆ. ಆದರೆ ತಮ್ಮದೇ ಕ್ಷೇತ್ರದಲ್ಲಿ ಜನ ಸಾಯುತ್ತಿದ್ದರರು ನೋಡಲು ಸಮಯವಿಲ್ಲ, ಸೌಜನ್ಯಕ್ಕೂ ಒಂದು ಬಾರಿ ಭೇಟಿ ನೀಡಿ ವಿಚಾರಿಸಲು ಸಮಯ ಸಿಗದಿರುವುದು ಜಿಲ್ಲೆಯ ದುರಾದ್ರಷ್ಟ. ಜನರ ಜೀವನದ ಜೊತೆ ಚೆಲ್ಲಾಟ ವಾಡುತ್ತಿರುವ ಚಿಕ್ಕಮಗಳೂರಿನ ನಗರಸಭೆ, ಹಾಗೂ ಶಾಸಕರ ನಡತೆಯನ್ನು SDPI ತೀರ್ವವಾಗಿ ಖಂಡಿಸುತ್ತದೆ.
ಈ ಘಟನೆಗೆ ಸಂಬಂಧಿಸಿದಂತೆ ನಗರ ಸಭಾ ಅಯುಕ್ತರು, ಸದಸ್ಯರು ಮತ್ತು ಶಾಸಕರು ಆದಷ್ಟು ಬೇಗ ಗಮನಹರಿಸಿ ಅಸ್ವಸ್ಥವಾಗಿರುವ ಮಕ್ಕಳ ಚಿಕಿತ್ಸಾ ಖರ್ಚು ಭರಿಸಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ ಬೇಕು ಹಾಗು ನಗರದ ನೀರಿನ ಸಮಸ್ಯೆಯನ್ನು ಅತಿ ಶೀಘ್ರದಲ್ಲಿ ಪರಿಹರಿಸಬೇಕು. ವಿಷಯಕ್ಕೆ ಸಂಭಂದಿಸಿ ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಬೇಕು ಇಲ್ಲಾವಾದಲ್ಲಿ SDPI ಪಕ್ಷದ ವತಿಯಿಂದ ದಲಿತ ಸಂಘಟನೆಗಳನ್ನು ಹಾಗೂ ಜನಪರ ಚಿಂತಕರನ್ನು ಒಟ್ಟುಗೂಡಿಸಿ ನಗರಸಭಗೆ ಮುತ್ತಿಗೆ ಹಾಕಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಗೌಸ್ ಮುನೀರ್ ಅಧ್ಯಕ್ಷರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಚಿಕ್ಕಮಗಳೂರು ಜಿಲ್ಲೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.