ಕನ್ಯಾಕುಮಾರಿ (ವಿಶ್ವ ಕನ್ನಡಿಗ ನ್ಯೂಸ್) : ಕುಡಿದು ಬರುತ್ತಿದ್ದ ತಂದೆಗೆ ಹೆದರಿ ಹತ್ತಿರದ ರಬ್ಬರ್ ತೋಟದಲ್ಲಿ ಅಡಗಿ ಕೊಂಡಿದ್ದ ನಾಲ್ಕು ವರ್ಷದ ಬಾಲಕಿ ಹಾವು ಕಚ್ಚಿ ಮೃತಪಟ್ಟ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಂದ್ರನ್ ಬಂಧಿತ ಆರೋಪಿ.
ಪ್ರತಿದಿನ ರಾತ್ರಿ ಕೆಲಸದ ನಂತರ ಕುಡಿದು ಬರುವ ಸುರೇಂದ್ರನ್ ತನ್ನ ಪತ್ನಿ ಸುಜಿ ಮೋಲ್ ಮತ್ತು ಮಕ್ಕಳಾದ ಸುಶ್ವಿಕಾ ಮೋಲ್ (4), ಸುಶಿನ್ ಸಿಜೋ (12) ಮತ್ತು ಸುಜಿಲಿನ್ ಜೋ (9) ಅವರನ್ನು ಪ್ರತಿದಿನ ಹೊಡೆಯುತ್ತಿದ್ದನು. ತಾಯಿ ಮತ್ತು ಮಕ್ಕಳು ಸುರೇಂದ್ರನ್ ಕುಡಿದು ಮನೆಗೆ ಬಂದಾಗ ಹತ್ತಿರದ ರಬ್ಬರ್ ತೋಟಕ್ಕೆ ಓಡಿಹೋಗುತ್ತಿದ್ದರು. ಅದೇ ರೀತಿ ಇವರು ರಬ್ಬರ್ ತೋಟದಲ್ಲಿ ಅಡಗಿಕೊಂಡಿದ್ದಾಗ ಸುಶ್ವಿಕಾ ಎಂಬ ನಾಲ್ಕು ವರ್ಷದ ಬಾಲಕಿ ಹಾವು ಕಚ್ಚಿದ ನಂತರ ಸಾವನ್ನಪ್ಪಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.